Advertisement

ಇದು ಶಾಂತಿ ಮಾತುಕತೆಯ ಸಮಯ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

09:22 AM Mar 19, 2022 | Team Udayavani |

ಕೀವ್: ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದು ಮಾಸ್ಕೋದೊಂದಿಗೆ ಅರ್ಥಪೂರ್ಣ ಮಾತುಕತೆಗೆ ಸಮಯ ಎಂದು ಶನಿವಾರ ಹೇಳಿದರು. ಇದು ತನ್ನದೇ ಆದ ತಪ್ಪುಗಳಿಂದ ಹಾನಿಯನ್ನು ಕಡಿಮೆ ಮಾಡಲು ರಷ್ಯಾಕ್ಕೆ ಏಕೈಕ ಅವಕಾಶವಾಗಿದೆ ಎಂದು ಝೆಲೆನ್ಸ್ಕಿ ಹೇಳಿದರು.

Advertisement

“ತನ್ನ ಸ್ವಂತ ತಪ್ಪುಗಳಿಂದ ಹಾನಿಯನ್ನು ಕಡಿಮೆ ಮಾಡಲು ರಷ್ಯಾಕ್ಕೆ ಏಕೈಕ ಅವಕಾಶವಾಗಿದೆ. ಇದು ಭೇಟಿಯಾಗುವ ಸಮಯ. ಮಾತನಾಡಲು ಸಮಯ.” ಎಂದು ಉಕ್ರೇನ್ ಅಧ್ಯಕ್ಷ ಹೇಳಿದರು.

ಯುದ್ಧದ ಬೆಲೆಯು ರಷ್ಯಾಕ್ಕೆ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ. ಇದರಿಂದ ಚೇತರಿಸಿಕೊಳ್ಳಲು ಪೀಳಿಗೆಗಳೇ ಬೇಕಾಗಬಹುದು ಎಂದರು.

ಇದನ್ನೂ ಓದಿ:ಸಂತೋಷಕ್ಕೆ ಫಿನ್ಲಂಡ್‌ ಬೆಸ್ಟ್‌

“ಉಕ್ರೇನ್‌ ಗೆ ಪ್ರಾದೇಶಿಕ ಸಮಗ್ರತೆ ಮತ್ತು ನ್ಯಾಯವನ್ನು ಪುನಃಸ್ಥಾಪಿಸಲು ಇದು ಸಮಯ. ರಷ್ಯಾದ ನಷ್ಟವು ತುಂಬಾ ದೊಡ್ಡದಾಗಿದೆ, ಹಲವಾರು ತಲೆಮಾರುಗಳ ವರೆಗೆ ಇದನ್ನು ಸರಿದೂಗಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

Advertisement

ಮಾರಿಯುಪೋಲ್‌ನಲ್ಲಿ ಥಿಯೇಟರ್‌ ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದ ನಾಗರಿಕರನ್ನು ಹುಡುಕಲು ರಕ್ಷಣಾ ಪಡೆ ಕಾರ್ಯನಿರತವಾಗಿದೆ. ಇಲ್ಲಿಯವರೆಗೆ 130 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಆದರೆ, ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next