Advertisement
ಇಸ್ರೇಲ್ನ “ಜಿಯೋಲಾಜಿಕಲ್ ಸೆಂಟರ್ ಟೆಲ್ ಅವಿವ್ ರಮಾತ್ ಗನ್’ ಸಫಾರಿಯಿಂದ ಒಂದು ಹೆಣ್ಣು ಮತ್ತು ಒಂದು ಗಂಡು ಜಿಬ್ರಾಗಳನ್ನು ಬನ್ನೇರುಘಟ್ಟಕ್ಕೆ ತರಲಾಗಿತ್ತು. ಸರಿಸುಮಾರು ಒಂದು ವರ್ಷಗಳ ಕಾಲ ಎರಡು ಜಿಬ್ರಾಗಳನ್ನು ಪತ್ಯೇಕ ಸ್ಥಳದಲ್ಲಿ ಇಟ್ಟು ಜೋಪಾನವಾಗಿ ನೋಡಿ ಕೊಳ್ಳಲಾಗಿತ್ತು.
Related Articles
Advertisement
ಆದರೆ, ಜಿಬ್ರಾಗಳ ಆವರಣದೊಳಗೆ ಓಣಗಿದ ಮರವೊಂದನ್ನು ನೆಡಲೆಂದು ದೊಡ್ಡ ಗುಂಡಿ ತೆಗೆದಿದ್ದ ಅಧಿಕಾರಿಗಳು, ಅದರಲ್ಲಿ ಮರವನ್ನೂ ನೆಡೆದೆ, ಪ್ರಾಣಿಗಳು ಹೋಗದಂತೆ ರಕ್ಷಣಾ ಕ್ರಮವನ್ನೂ ಕೈಗೊಳ್ಳದೆ ಹಾಗೆಯೇ ಬಿಟ್ಟಿದ್ದರು. ನಾಲ್ಕು ದಿನಗಳಾದರೂ ಗುಂಡಿ ಹಾಗೇ ಉಳಿದಿತ್ತು. ಹೀಗಿರುವಾಗಲೇ ಜೀಬ್ರಾ ಗುಂಡಿಗೆ ಬಿದ್ದು ಸಾವಿಗೀಡಾಗಿದ್ದು, ಪ್ರಾಣಿ ಪ್ರಿಯರಿಗೆ ಬೇಸರ ತರಿಸಿದೆ.
ಸದಸ್ಯ ಕಾರ್ಯದರ್ಶಿ ಬೇಟಿ: ಜೀಬ್ರಾ ಮೃತಪಟ್ಟ ಸುದ್ದಿ ತಿಳಿಯುತ್ತಲೇ ಮೈಸೂರಿನಿಂದ ಬನ್ನೇರುಘಟ್ಟಕ್ಕೆ ಆಗಮಿಸಿದ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಎಂಬ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಾಣಿ ಸಾವಿಗೆ ನಿಖರ ಕಾರಣ ಹಾಗೂ ಯಾರ ನಿರ್ಲಕ್ಷ್ಯ ಇದೆ ಎಂಬುದರ ಬಗ್ಗೆ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.