Advertisement

ಅಜಿತ್‌ ದೋವಲ್‌ ಪುತ್ರನಿಗೆ “ಝೆಡ್‌’ಕೆಟಗರಿ ಭದ್ರತೆ

02:56 AM May 01, 2019 | Sriram |

ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಪುತ್ರ ಶೌರ್ಯ ದೋವಲ್‌ ಅವರಿಗೆ ಉನ್ನತ ಮಟ್ಟದ “ಝೆಡ್‌’ ಕೆಟಗರಿಯ ಭದ್ರತೆ ಯನ್ನು ಕಲ್ಪಿಸಲಾಗಿದೆ. ಅವರ ಜೀವಕ್ಕೆ ಬೆದರಿಕೆ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

Advertisement

ಅಜಿತ್‌ ದೋವಲ್‌ ಅವರ ಶತ್ರುಗಳಿಂದಾಗಿ ಶೌರ್ಯ ಅವರ ಜೀವಕ್ಕೆ ಅಪಾಯವಿರುವುದಾಗಿ ಕೇಂದ್ರ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖ ವಾಗಿದ್ದು, ಈ ಹಿನ್ನೆಲೆಯಲ್ಲಿ ಅವ ರಿಗೆ ಕೇಂದ್ರ ಅರೆಸೇನಾ ಪಡೆಯಿಂದ ಝೆಡ್‌ ಕೆಟ  ಗರಿಯ ಭದ್ರತೆ ಒದಗಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಅದರಂತೆ, ಸುಮಾರು 15-16 ಕಮಾಂಡೋಗಳು ಶೌರ್ಯ ದೋವಲ್‌ಗೆ ಭದ್ರತೆ ಒದಗಿಸಲಿ ದ್ದಾರೆ. ಇವರ ಜೊತೆಗೆ, ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಕಣಕ್ಕಿಳಿದಿರುವ 10 ಮಂದಿ ಬಿಜೆಪಿ ಅಭ್ಯರ್ಥಿಗಳಿಗೂ ಅಲ್ಪಾವಧಿಗೆ ಕೇಂದ್ರ ಸರಕಾರ ಭದ್ರತೆ ಒದಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next