Advertisement

ಕ್ರಿಕೆಟ್‌ ಆಯ್ಕೆ ಮಂಡಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಯುವರಾಜ್

09:51 AM Nov 05, 2019 | Team Udayavani |

ಮುಂಬಯಿ: ಭಾರತದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಈಗಿನ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಮಂಡಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇವರ ಚಿಂತನೆ ಆಧುನಿಕ ಕ್ರಿಕೆಟಿಗೆ ಅನುಗುಣವಾಗಿಲ್ಲ ಎಂದಿದ್ದಾರೆ.

Advertisement

“ನಮಗೆ ಅತ್ಯುತ್ತಮ ದರ್ಜೆಯ ಕ್ರಿಕೆಟ್‌ ಆಯ್ಕೆ ಸಮಿತಿಯ ಅಗತ್ಯವಿದೆ. ಮುಖ್ಯವಾಗಿ, ಆಧುನಿಕ ಕ್ರಿಕೆಟಿಗೆ ಅನುಗುಣವಾದ ಚಿಂತನೆಯನ್ನು ಹೊಂದಿರಬೇಕು. ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಮಂಡಳಿ ಈ ಮಟ್ಟದಲ್ಲಿಲ್ಲ. ನಿಜ, ಆಯ್ಕೆ ಸಮಿತಿ ಕೆಲಸ ಸುಲಭವಲ್ಲ. ಅವರು ಯಾವುದೇ 15 ಮಂದಿ ಆಟಗಾರರನ್ನು ಆಯ್ಕೆ ಮಾಡಿದರೂ ಟೀಕೆ ತಪ್ಪುವುದಿಲ್ಲ…’ ಎಂದು ಯುವರಾಜ್‌ ಸಿಂಗ್‌ ಹೇಳಿದರು.

ಭಾರತದ ಟಿ20 ತಂಡಕ್ಕೆ ಆಯ್ಕೆ ಯಾದ ಮುಂಬಯಿಯ ಆಲ್‌ರೌಂಡರ್‌ ಶಿವಂ ದುಬೆ ಅವರನ್ನು ನಿಮಗೆ ಹೋಲಿಸಲಾಗುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಯುವರಾಜ್‌ ಸಿಂಗ್‌ ಖಾರವಾಗಿ ಉತ್ತರಿಸಿದರು. “ಮೊದಲು ಆ ಕ್ರಿಕೆಟಿಗ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕನ್ನು ಆರಂಭಿಸಲಿ. ಒಂದು ಹಂತಕ್ಕೆ ತಲುಪಿದ ಬಳಿಕ ಆತನನ್ನು ಉಳಿದವರೊಂದಿಗೆ ಹೋಲಿಕೆ ಮಾಡಲಾರಂಭಿಸಿ. ದುಬೆ ಪ್ರತಿಭಾನ್ವಿತ ಆಟಗಾರ…’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next