Advertisement

ಯುವವಾಹಿನಿ ಬಜಪೆ ಘಟಕ: ಸ್ವಚ್ಛತಾ ಅಭಿಯಾನ

07:55 PM Jun 06, 2019 | Team Udayavani |

ಬಜಪೆ: ಯುವವಾಹಿನಿ ಬಜಪೆ ಘಟಕ, ಯುವವಾಹಿನಿ ಮಹಿಳಾ ಘಟಕ, ಮಂಗಳೂರು ಮತ್ತು ಮಾತಾ ಅಮೃತಾನಂದಮಯಿ ಮಠ, ಮಂಗಳೂರು ಇದರ ಸಹಯೋಗದಲ್ಲಿ ಬಜಪೆ ಪೊರ್ಕೋಡಿ ದ್ವಾರದಿಂದ ಅಂಥೋನಿ ಕಟ್ಟೆಯವರಗೆ ಸ್ವಚ್ಛತಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು.

Advertisement

ಈ ಸಂದರ್ಭ ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷೆ ಸಂಧ್ಯಾ ಕುಳಾಯಿ, ಹಾಗೂ ಸದಸ್ಯರು, ಯುವವಾಹಿನಿ ಮಹಿಳಾ ಘಟಕ, ಮಂಗಳೂರು ಇದರ ಅಧ್ಯಕ್ಷೆ ಉಮಾ ಶ್ರೀಕಾಂತ್‌ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮಹಮದ್‌ ಹನೀಫ್‌ ಹಿಲ್‌ಟಾಪ್‌ ಅವರು ಕಸ ವಿಲೇವಾರಿಗೆ ವಾಹನ ವ್ಯವಸ್ಥೆ ಮಾಡಿಕೊಟ್ಟರು.ಉದಯವಾಣಿ ವರದಿಗೆ ಸ್ಪಂದನೆ ನೀಡಿದ ಯುವವಾಹಿನಿ ಇಲ್ಲಿನ ತೋಡು, ಚರಂಡಿಯಲ್ಲಿ ತ್ಯಾಜ್ಯದಿಂದ ಪರಿಸರ ,ಕೃಷಿಕರಿಗೆ ತೊಂದರೆ ಬಗ್ಗೆ ಉದಯವಾಣಿ ವರದಿ ಮಾಡಿತ್ತು.ಯುವವಾಹಿನಿ ಬಜಪೆ ಘಟಕ ಹಾಗೂ ಮಹಿಳಾ ಘಟಕ ಇದಕ್ಕೆ ಸ್ಪಂದನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next