Advertisement

ಕೋವಿಡ್ 19 ಭಯ ತಿಳಿಯಾದ ಬಳಿಕವಷ್ಟೆ ಯುವರತ್ನ ದರ್ಶನ

10:45 AM May 04, 2020 | Suhan S |

ಕೋವಿಡ್‌ -19 ಕಾರಣ ಜಾರಿಯಲ್ಲಿರುವ ಕಠಿಣ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರವೇ ಯುವರತ್ನದ ಟ್ರೈಲರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಂತೋಷ್‌ ಆನಂದ್‌ ರಾಮ್‌ ಹೇಳಿದ್ದಾರೆ.

Advertisement

ಬಹುನಿರೀಕ್ಷಿತ ಚಿತ್ರ ಯುವರತ್ನ ನಟ-ನಿರ್ದೇಶಕರ ಜೋಡಿಯ ಎರಡನೇ ಕಾಣಿಕೆಯಾಗಿದೆ. ಈ ಹಿಂದೆ ಈ ಜೋಡಿ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್‌

ಜತೆಯಾಗಿ ರಾಜಕುಮಾರ ಚಿತ್ರ ನಿರ್ಮಿಸಿದ್ದರು. ಹಾಡುಗಳು ಮತ್ತು ಟ್ರೈಲರ್‌ ಬಗ್ಗೆ ಸಾಕಷ್ಟು ಕುತೂಹಲವಿದೆ. ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿದೆ. ಇದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ನಿರ್ದೇಶಕ ಹೇಳಿದ್ದಾರೆ. ಸಂಗೀತ ನಿರ್ದೇಶಕ ಎಸ್‌ ತಮನ್‌ ಯುವರತ್ನಕ್ಕಾಗಿ ತಮ್ಮ ಐದು ಅತ್ಯುತ್ತಮ ಹಾಡುಗಳ ಸಂಯೋಜನೆ ಮಾಡಿದ್ದಾರೆ. ಅವೆಲ್ಲವನ್ನೂ ಆದಷ್ಟು ಶೀಘ್ರ ರಿಲೀಸ್‌ ಆಗಲಿದೆ.  ತಂಡವು ಖಂಡಿತವಾಗಿಯೂ ನಿಯಮಿತ ಯೋಜನೆಯೊಂದಿಗೆ ಕೆಲಸ ಮಾಡುತ್ತಿದೆ. ಚಿತ್ರ ಬಿಡುಗಡೆಯಾದಾಗ ವೀಕ್ಷಕರು ತಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ವೀಕ್ಷಿಸಲಿದ್ದಾರೆ ಎಂದು ಆಶಯವನ್ನು ವ್ಯಕ್ತಪಡಿಸಿದ್ದಾರೆ ನಿರ್ದೇಶಕರು.

ಸದ್ಯಕ್ಕೆ, ಈ ಲಾಕ್‌ಡೌನ್‌ ಅವಧಿಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಇದ್ದು ಅವರ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕೆಂದು ಅವರು ಕೋರಿದ್ದಾರೆ. ಯುವರತ್ನ ಚಿತ್ರವನ್ನು ವಿಜಯ್‌ ಕಿರಗಂದೂರ್‌ ನಿರ್ಮಿಸಿದ್ದು, ಬಹುತಾರಾಂಗಣವನ್ನು ಒಳಗೊಂಡಿದೆ. ಈ ಚಿತ್ರದ ಮೂಲಕ ಸಯೆಷಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಲನ್‌ ಪಾತ್ರದಲ್ಲಿ ಧನಂಜಯ್‌ ಅಭಿನಯವಿದೆ. ತಾರಾಗಣದಲ್ಲಿ ದಿಗಂತ್‌, ಸೋನು ಗೌಡ, ಪ್ರಕಾಶ್‌ ರೈಮತ್ತು ಸಾಯಿಕುಮಾರ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next