Advertisement

ಹೋರಾಟ ಮತ್ತು ಪ್ರಯತ್ನ ನಮ್ಮದು, ಫಲಾಫಲ ಜನರಿಗೆ ಸೇರಿದ್ದು: ವೈ.ಎಸ್.ವಿ.ದತ್ತಾ

04:29 PM Sep 28, 2021 | Team Udayavani |

ಬೆಂಗಳೂರು: ಉಪ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ಸಮಾನವಾದ ದೂರದಲ್ಲಿಟ್ಟು ನಮ್ಮ ಪಕ್ಷದ ಅಸ್ತಿತ್ವದ ಪ್ರಶ್ನೆ, ನಮ್ಮ ಕಾರ್ಯಕರ್ತರ ಅಳಿವು ಉಳಿವಿನ ಪ್ರಶ್ನೆಯಾಗಿ ಹೋರಾಟ ಮಾಡುತ್ತೇವೆ. ಹೋರಾಟ ಮತ್ತು ಪ್ರಯತ್ನ ನಮ್ಮದು. ಫಲಾಫಲ ಜನರಿಗೆ ಸೇರಿದ್ದು ಎಂದು ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತಾ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ನಡೆಯುವ ಎರಡೂ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದರು.

ನಾಳೆ ಅಥವಾ ನಾಡಿದ್ದು ಕೂಡ ಹೆಚ್ ಡಿಕೆ ಮತ್ತು ಹೆಚ್ ಡಿಡಿ ಸೇರಿದಂತೆ ಹಿರಿಯರು ಸೇರಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ. ಇವತ್ತು ಅಪೇಕ್ಷಿತ ಅಭ್ಯರ್ಥಿಗಳನ್ನು ಸಭೆಗೆ ಕರೆದಿರುವುದರಿಂದ ನಾಳೆ‌ ನಾಡಿದ್ದು ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ ಎಂದರು.

ಇದನ್ನೂ ಓದಿ:ನನ್ನ ನಾಯಕತ್ವ ಅಲ್ಲ, ಪಕ್ಷದ ನಾಯಕತ್ವದಲ್ಲೇ ಚುನಾವಣೆ: ಸಿಎಂ ಬೊಮ್ಮಾಯಿ

ನಿನ್ನೆಯಿಂದ ಜೆಡಿಎಸ್ ಕಾರ್ಯಾಗಾರ ನಡೆಯುತ್ತಿದೆ. ನಾನು ನಿನ್ನೆ ಸಂಪೂರ್ಣವಾಗಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದೆ. ಆದರೆ ಇಂದು ಕ್ಷೇತ್ರದ ಸಮಸ್ಯೆಗಳಿಗಾಗಿ ವಿಧಾನಸೌಧಕ್ಕೆ ಬಂದಿದ್ದೇನೆ ಎಂದು ವೈ ಎಸ್ ವಿ ದತ್ತಾ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next