Advertisement

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

03:54 PM Mar 26, 2024 | Team Udayavani |

ಯಾದಗಿರಿ: ಹೋಳಿ‌ ಹಬ್ಬದ ಹಿನ್ನೆಲೆಯಲ್ಲಿ ಬಣ್ಣ ಆಡಿದ ನಂತರ ಕೆರೆಯಲ್ಲಿ ಈಜಾಡಲು ಹೋಗಿ ಯುವಕ ನೀರು ಪಾಲಾಗಿದ್ದಾನೆ. ಯಾದಗಿರಿ ತಾಲೂಕಿನ ಯರಗೋಳ ವ್ಯಾಪ್ತಿಯ ಅರಕೇರಾ ಬಿ ಗ್ರಾಮದಲ್ಲಿ ಘಟನೆ ನಡೆದಿದೆ‌.

Advertisement

ಅರಕೇಕಾ ಬಿ. ಗ್ರಾಮದ ಯುವಕ ಬಸವಲಿಂಗಪ್ಪ (18) ನೀರು ಪಾಲಾಗಿದ್ದಾನೆ. ಬೆಳಿಗ್ಗೆ ಸ್ನೇಹಿತರೊಡನೆ ಹೋಳಿ ಹಬ್ಬ ಆಚರಿಸಿ, ಬಣ್ಣದೋಕಳಿ ಆಡಿದ ನಂತರ ತಮ್ಮನ ಜೊತೆ ಕೆರೆಗೆ ಈಜಾಡಲು ತೆರಳಿದ ಯುವಕ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಸೇರಿ ಮೃತ ದೇಹ ಹೊರ ತೆಗೆದರು. ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: LS Election: ಎ.3ಕ್ಕೆ ದ.ಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ

Advertisement

Udayavani is now on Telegram. Click here to join our channel and stay updated with the latest news.

Next