Advertisement

ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಕೊಲೆ!

09:53 AM Aug 09, 2021 | Team Udayavani |

ರಾಯಚೂರು: ತಾಲ್ಲೂಕಿನ ಗುಂಜಹಳ್ಳಿ ಗ್ರಾಮದ ಹೊರವಲಯದಲ್ಲಿ ಯುವಕನನ್ನು ಗುರುತು ಸಿಗದ ಹಾಗೆ ಜಜ್ಜಿ ಕೊಲೆಗೈಯ್ಯಲಾಗಿದೆ.

Advertisement

ರವಿವಾರ ಸಂಜೆ ಪಾರ್ಟಿ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಯುವಕನ ದೇಹದ ಮೇಲೆ ಯಾವುದೇ ಗುರುತು ಸಿಗದಂತೆ ಶರ್ಟ್ ನಲ್ಲಿದ್ದ ಟೈಲರ್ ಗುರುತನ್ನು ಕೂಡ ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ರಸ್ತೆ ಬದಿಯ ಗುಡಿಸಲುಗಳ ಮೇಲೆರಗಿದ ಯಮರೂಪಿ ಟ್ರಕ್: 8 ಮಂದಿ ಸಾವು

ಸ್ಥಳಕ್ಕೆ ಯರಗೇರಾ ಪೊಲೀಸರು ಶ್ವಾನ ದಳದಳದೊಂದಿಗೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ಶ್ವಾನವು ಕೊಲೆ ನಡೆದ ಸ್ಥಳದಿಂದ ಮಂತ್ರಾಲಯದ ಮಾರ್ಗವಾಗಿ ಒಂದು ಕಿ.ಮೀ ಚಲಿಸಿ ನಿಂತಿದೆ‌.

Advertisement

ನಂತರ ಗುಂಜಹಳ್ಳಿ ಗ್ರಾಮದ ಕಡೆ ಒಂದು ಕಿ.ಮಿ. ಸಂಚರಿಸಿದ್ದು ಅನುಮಾನಕ್ಕೆಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next