Advertisement

ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ!

01:00 PM Jun 28, 2021 | Team Udayavani |

ಕಲಬುರಗಿ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನೋರ್ವನ ಕೊಲೆಗೈದಿರುವ ಘಟನೆ ಕಲಬುರಗಿ ತಾಲೂಕಿನ ಆಲಗೋಡ ಗ್ರಾಮದ ಬಳಿ ನಡೆದಿದೆ.

Advertisement

ಸಂತೋಷ್ ಹೂಗರ (30 ವ) ಕೊಲೆಯಾದ ಯುವಕ. ಕಲಬುರಗಿಯ ರಾಮ ನಗರದ ನಿವಾಸಿಯಾಗಿದ್ದ ಸಂತೋಷ್ ನಿನ್ನೆ (ರವಿವಾರ) ಮುಂಜಾನೆ ಮನೆಯಿಂದ ಹೊರಹೋಗಿದ್ದ. ಇಂದು ಸಂತೋಷ್ ಶವವಾಗಿ ಪತ್ತೆಯಾಗಿದ್ದಾನೆ.‌ ಪರಿಚಿತರಿಂದಲೇ ಈತ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:ಮಕ್ಕಳ ಜೀವ ಮುಖ್ಯ, ಶಾಲೆ ತೆರೆಯಲು ಅವಸರ ಬೇಡವೆಂದು ಏಮ್ಸ್ ಮುಖ್ಯಸ್ಥರಿಂದ ಸೂಚನೆ: ಸುಧಾಕರ್

ಘಟನಾ ಸ್ಥಳಕ್ಕೆ ‘ಸಿ’ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ಜೆ.ಎಚ್.ಇನಾಂದಾರ್, ಗ್ರಾಮೀಣ ಇನ್ ಸೆಕ್ಟರ್ ಬಾಸು ಚವ್ಹಾಣ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next