Advertisement

ಈ ರಾಶಿಯ ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು!

08:11 AM Jan 31, 2021 | Team Udayavani |

31-01-2021

Advertisement

ಮೇಷ: ಅವಿವಾಹಿತರಿಗೆ ಮಂಗಲಕಾರ್ಯದ ಶುಭವಾರ್ತೆ. ವಿವಾಹಿತರಿಗೆ ಸಂತಾನ ಲಾಭದ ಸಂಭ್ರಮವಿದೆ. ಪೋಷಕರ ಆರೋಗ್ಯಕ್ಕಾಗಿ ಖರ್ಚುವೆಚ್ಚ, ಜೊತೆ ಪ್ರಯಾಣವು ಕೂಡಿ ಬರುವುದು. ದಿನಾಂತ್ಯ ಶುಭವಿದೆ.

ವೃಷಭ: ದೂರ ಪ್ರಯಾಣದಿಂದ ಆರೋಗ್ಯ ಹಾನಿಯಾದೀತು. ಗೃಹಾಲಂಕಾರ ಯಾ ಅಭಿವೃದ್ಧಿಯ ಬಗ್ಗೆ ಖರ್ಚು ತಂದೀತು. ವಿವಾಹಿತರಿಗೆ ಸಂತತಿ ಲಾಭವಿದೆ. ಕಾರ್ಯಕ್ಷೇತ್ರದಲ್ಲಿ ಸ್ಥಾನ ಪ್ರಾಪ್ತಿಯೂ, ಭಡ್ತಿಯು ದೊರಕುವುದು.

ಮಿಥುನ: ಸೋದರ ವರ್ಗದವರೊಡನೆ ಮನಸ್ತಾಪ ಕಂಡುಬಾರದಂತೆ ಜಾಗ್ರತೆ ಮಾಡಿರಿ. ಕಚೇರಿಯಲ್ಲಿ ಕಾರ್ಯಭಾರದ ಹೊರೆಯಿಂದ ಬೇಸರ ಬಂದೀತು. ಸಾಹಸ ಪ್ರವೃತ್ತಿಯವರಿಗೆ ಮುಂಭಡ್ತಿ ಹಾಗೂ ಸೂಕ್ತ ಅವಕಾಶವಿದೆ.

ಕರ್ಕ: ಕೋಪಕ್ಕೆ ಎಡೆಗೊಟ್ಟು ಆಪ್ತೇಷ್ಟರ ಆತ್ಮೀಯತೆಗೆ ಕುತ್ತು ತಂದುಕೊಳ್ಳುವಿರಿ. ಪತ್ನಿಯೊಡನೆ ಮಾತಿಗೆ ಮಾತು ಬೆಳೆದು ಬೇಸರವಾದೀತು. ಆದಾಯವು ಚೆನ್ನಾಗಿದ್ದರೂ ಖರ್ಚು ಅಷ್ಟೇ ಇರುತ್ತದೆ. ಧೈರ್ಯವಾಗಿರಿ.

Advertisement

ಸಿಂಹ: ಹೊಸದಾದ ಶತ್ರು ಹುಟ್ಟಿ ನಿಮ್ಮ ಕಾರ್ಯಕ್ಕೆ ತಡೆ ತಂದಾನು. ಸಲ್ಲದ ಆರೋಪಕ್ಕೆ ಗುರಿಯಾಗದಿರಿ. ಜಾಗ್ರತೆ. ಪ್ರೇಮ ಪ್ರಕರಣಕ್ಕೆ ಎಡೆಗೊಡಬೇಡಿರಿ. ಮೇಲಾಧಿಕಾರಿಗಳಿಂದ ವಿನಾಕಾರಣ ಪೀಡೆ ಕಂಡುಬರುವುದು. ಶುಭವಿದೆ.

ಕನ್ಯಾ: ಆಶಾಭಂಗವಾಗಿ ಸ್ಥಾನಪಲ್ಲಟ ಯೋಗವೂ ಕಂಡುಬಂದೀತು. ಸಾಹಸದ ಯಾವ ಕೆಲಸಕ್ಕೂ ಕೈಹಾಕದಿರಿ. ಧನವಿನಿಯೋಗವೂ ವಿವೇಚನೆಗೆ ಒಳಗಾಗಲಿ. ಮಿತ್ರನ ಸಹಾಯ, ಬಂಧುಗಳ ಸಹಾಯದಿಂದ ಕಾರ್ಯ ಕೈಗೂಡಲಿದೆ.

ತುಲಾ: ಸ್ವತಂತ್ರ ವೃತ್ತಿಪರರಿಗೂ ಧನಚಿಂತೆ ಕಾಡಲಿದೆ. ದೀರ್ಘ‌ಕಾಲೀನ ಧನವಿನಿಯೋಗವು ಫ‌ಲ ನೀಡಲಿದೆ. ಗೃಹಕೃತ್ಯ ಹಾಗೂ ಕಾರ್ಯಕ್ಷೇತ್ರದಲ್ಲಿ ತೃಪ್ತಿ ಇದೆ. ಉಷ್ಣಭಾದೆಯಿಂದ ಆರೋಗ್ಯದಲ್ಲಿ ಏರುಪೇರು ಇದ್ದೀತು.

ವೃಶ್ಚಿಕ: ಹೊಸ ಉದ್ಯೋಗ ಪ್ರಾಪ್ತಿ ಸಂಭವವಿದೆ. ಕಾರ್ಯನಿಮಿತ್ತ ದೂರ ಪ್ರಯಾಣದ ಸಂಭವವಿದೆ. ಅನಪೇಕ್ಷಿತ ಸಹಾಯಹಸ್ತ ಮುಂದೆ ಧರ್ಮಸಂಕಟಕ್ಕೆಡೆ ಮಾಡಲಿದೆ. ಕಾರ್ಯ ಬಾಹುಳ್ಯದಿಂದ ದೇಹಭಾದೆ ಕಾಡಲಿದೆ.

ಧನು: ನೆಂಟರಿಷ್ಟರ ಆಗಮನದಿಂದ ಕೊಂಚ ಸಂತಸವಿದ್ದರೂ ಬೇಡಿಕೆಗೂ, ಪೂರೈಕೆಗೂ ಅಜಗಜಾಂತರ. ಚಿಂತೆ ತಪ್ಪದು. ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು. ಜಾಗ್ರತೆ.

ಮಕರ: ನೂತನ ಕಾರ್ಯಸಿದ್ಧಿ ಇದೆ. ಆದರೂ ಕಾರ್ಯ ವಿಳಂಬವಾದೀತು. ಆಸ್ತಿ ಯಾ ಗೃಹ ಯಾ ನಿವೇಶನ ಖರೀದಿ ಯೋಗ ಕಂಡುಬಂದೀತು. ಗುಡಿ ಕೈಗಾರಿಕೆಯವರಿಗೆ ಅಭಿವೃದ್ಧಿ ಕಂಡುಬರುವುದು. ಆದರೂ ಜಾಗ್ರತೆ ಅಗತ್ಯವಿದೆ.

ಕುಂಭ: ಪುಣ್ಯ ಕಾರ್ಯಗಳಿಗೆ ಸದಾವಕಾಶವಿದೆ. ತೀರ್ಥಯಾತ್ರೆ ಯಾ ಪ್ರವಾಸ ಯಾ ಚಾರಣವೋ ಖುಶಿ ಕೊಡಲಿದೆ. ಪದೇ ಪದೇ ಎಡತಾಕುವ ಹಿತಶತ್ರುಗಳ ಕಾಟದಿಂದ ಬೇಸತ್ತು ಜೀವನವೇ ಸಾಕೆನಿಸಲಿದೆ. ಶುಭವಿದೆ.

ಮೀನ: ಕೈ ಕೆಳಗಿನವರಲ್ಲಿ ಪರಸ್ಪರ ಸಂಘರ್ಷವೇರ್ಪಟ್ಟು ಮನೆ ಕೆಲಸ ಕಾರ್ಯದಲ್ಲಿ ಭಂಗ ಬರಲಿದೆ. ಋಣಭಾರ ಹೆಚ್ಚಾಗಿ ಮಾನ ಹೋಗುವ ಪ್ರಸಂಗ ಎದುರಾದೀತು. ಗೆಳೆಯನ ಸಕಾಲ ಸಹಾಯದಿಂದ ಪಾರಾಗುವಿರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next