Advertisement

ರಾಶಿಫಲ: ಈ ರಾಶಿಯವರು ವ್ಯಾಪಾರ, ವ್ಯವಹಾರದಲ್ಲಿ ಸದ್ಯದ ಮಟ್ಟಿಗೆ ಹೂಡಿಕೆ ಮಾಡುವುದು ಬೇಡ.

07:38 AM Apr 16, 2021 | Team Udayavani |

16-04-2021

Advertisement

ಮೇಷ: ಮಾನಸಿಕವಾಗಿ ಒತ್ತಡ, ವರಮಾನದಲ್ಲಿ ಅಸ್ಥಿರತೆ, ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಕಾರ್ಯ ನಿರ್ವಹಣೆಗಳಲ್ಲಿ ಶ್ರಮವು ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಶುಭಫ‌ಲಗಳು ಅನುಭವಕ್ಕೆ ಬರಲಿದೆ.

ವೃಷಭ: ಸಾಂಸಾರಿಕವಾಗಿ ಉತ್ತಮ ಬದಲಾವಣೆ ಇದೆ. ಶುಭ ಕಾರ್ಯದಲ್ಲಿ ಪ್ರಗತಿ ಕಂಡು ಬರುವುದು. ಉದ್ಯೋಗದಲ್ಲಿ ಸಫ‌ಲತೆ ಪ್ರಾಪ್ತಿ ಇದೆ. ಅನಿರೀಕ್ಷಿತ ರೀತಿಯಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿದೆ. ಕಾರ್ಯದಲ್ಲಿ ವಿಳಂಬವಿದೆ.

ಮಿಥುನ: ಧನವ್ಯಯವು ಹಲವು ರೀತಿಯಲ್ಲಿ ಕಂಡು ಬರುವುದು. ಆದರೂ ಅದರಲ್ಲಿ ಸಫ‌ಲತೆ ಹಾಗೂ ಸಮಾಧಾನ ಕಂಡುಬರುವುದು. ಮನೋವ್ಯಾಕುಲತೆಗೆ ಗುರಿಯಾಗದಿರಿ. ಮನಸ್ಸಿನ ಎಣಿಕೆಯಂತೆ ಕಾರ್ಯಗಳು ನಡೆದಾವು.

ಕರ್ಕ: ಹಿಡಿದ ಕಾರ್ಯವನ್ನು ಛಲ ಹಿಡಿದು ಮುಂದುವರಿಸಿದರೆ ಸಾರ್ಥಕತೆ ಕಂಡು ಬರುವುದು. ಅತಿಥಿಗಳ ಆಗಮನದಿಂದ ಸಂತಸವಾಗಲಿದೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ. ನೀವು ಒಳ್ಳೆಯದು ಮಾಡಲು ಹೋದರೆ ಕೆಟ್ಟ ಮಾತು ಬಂದೀತು.

Advertisement

ಸಿಂಹ: ಕುಟುಂಬದ ಜನರ ಸಹಕಾರವು ಉತ್ತಮವಿದ್ದು ಮಾನಸಿಕವಾಗಿ ತೃಪ್ತಿ ದೊರಕಲಿದೆ. ಹಿತಶತ್ರುಗಳ ಚಲನೆಯ ಮೇಲೆ ಕಣ್ಣಿಡಿರಿ. ಮಾತಿಗೆ ಮರುಳಾಗದಿರಿ. ಕಾರ್ಯಸಾಧನೆಯಲ್ಲಿ ಯಶಸ್ಸು ತೋರಿ ಮನೋಕಾಮನೆ ಪೂರ್ಣವಾದೀತು.

ಕನ್ಯಾ: ಕಾರ್ಯಸಾಧನೆಯಲ್ಲಿ ಹೆಚ್ಚಿನ ಯಶಸ್ಸು ತೋರಿಬಂದು ಒಳ್ಳೆಯ ಕೀರ್ತಿ ಗಳಿಸುವಿರಿ. ಇದಕ್ಕೆ ನಿಮ್ಮ ತಾಳ್ಮೆಯೇ ಕಾರಣವಾಗಲಿದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಚಿಂತಿಸಿದ ಕಾರ್ಯದಲ್ಲಿ ಸಫ‌ಲತೆ ಇದೆ.

ತುಲಾ: ಶುಭ ವಾರ್ತೆಯು ಪ್ರಕಟವಾಗಿ ಸಂತಸದಿಂದ ಸಂಭ್ರಮಿಸುವಿರಿ. ಕಾರ್ಯಕ್ಷೇತ್ರದಲ್ಲಿ ದೃಢ ಮನಸ್ಸಿನಿಂದ ಮುಂದುವರಿಯಿರಿ. ನೂತನ ದಂಪತಿಗಳಿಗೆ ಹರುಷ ತರಲಿದೆ. ಸಣ್ಣ ಮಟ್ಟಿನ ಸಂಚಾರವು ಒದಗಿ ಬರುವುದು.

ವೃಶ್ಚಿಕ: ನಿಮ್ಮೆಣಿಕೆಯಂತೆ ಕಾರ್ಯ ಜಯವಾಗುವುದರಿಂದ ಆ ಕುರಿತು ಚಿಂತೆ ಬೇಡ. ವೈವಾಹಿಕ ಜೀವನವು ಉತ್ತಮವಿದ್ದು ಸಂತಸವಿದೆ. ಅಧಿಕ ಲಾಭವಿದ್ದರೂ ಖರ್ಚುವೆಚ್ಚಗಳು ಅಧಿಕವಾಗಿ ಕಂಡುಬರಲಿದೆ. ಜಾಗ್ರತೆ ಮಾಡಿರಿ.

ಧನು: ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಹೊರೆ ಬೀಳಲಿದೆ. ವ್ಯಾಪಾರ, ವ್ಯವಹಾರದಲ್ಲಿ ಸದ್ಯದ ಮಟ್ಟಿಗೆ ಹೂಡಿಕೆ ಬೇಡ. ಆರ್ಥಿಕ ಸ್ಥಿತಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡು ಬರಲಿದೆ. ಇದ್ದುದನ್ನು ಇದ್ದ ಹಾಗೆ ನಡೆಸಿಕೊಂಡು ಹೋಗಿರಿ.

ಮಕರ: ಗುರುಹಿರಿಯರ ಮಾರ್ಗದರ್ಶನದಿಂದ ಮುನ್ನ ತೋರಿಬರುವುದು. ಉದ್ಯೋಗ ವ್ಯವಹಾರದಲ್ಲಿ ಸ್ಥಿರತೆ ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ. ದೂರ ಪ್ರಯಾಣದಲ್ಲಿ ಜಾಗ್ರತೆ ಮಾಡಿರಿ. ವಾಹನದಿಂದ ಅನುಕೂಲವಾಗಲಿದೆ.

ಕುಂಭ: ಕೆಲವೊಂದು ಪ್ರತಿಕೂಲ ಸ್ಥಿತಿಯಲ್ಲೂ ನಿಮ್ಮ ಕಠಿಣ ಪರಿಶ್ರಮ ಹಾಗೂ ಧ್ಯೆಯವು ಕೂಡಿ ವಿಜಯ ಪ್ರಾಪ್ತಿಯಾಗಲಿದೆ. ಆರ್ಥಿಕ ವ್ಯವಹಾರದಲ್ಲಿ ಅಡಚಣೆ ಕಂಡುಬರುವುದು. ಮಾನಸಿಕವಾಗಿ ಅಸ್ಥಿರತೆಯು ಕಾಡಲಿದೆ.

ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ದಾಯಾದಿಗಳಿಂದ ಅವಮಾನ ಪ್ರಸಂಗವಿದೆ. ಆರ್ಥಿಕ ವಾಗಿ ತುಂಬಾ ಖರ್ಚು ಕಂಡುಬರುವುದು. ಮಾನಸಿಕವಾಗಿ ಅಸ್ಥಿರತೆ ಕಾಡಲಿದೆ. ಒಂದಿಲ್ಲೊಂದು ಸಮಸ್ಯೆ ಕಾಡಲಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next