Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಬಾಳಸಂಗಾತಿಯ ಕಿರಿಕಿರಿಗಳು ಆಗಾಗ ತಲೆ ತಿನ್ನಲಿವೆ!

07:43 AM Feb 23, 2021 | Team Udayavani |

23-02-2021

Advertisement

ಮೇಷ: ಆಗಾಗ ಆತಂಕಗಳನ್ನು ಸೃಷ್ಟಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಪರಿಚಿತರೊಡನೆ ಅನಾವಶ್ಯಕವಾದ ಸ್ನೇಹಕ್ಕೆ ಅವಕಾಶ ನೀಡದಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಗಾಗ ಭಂಗ ಬರಲಿದೆ.

ವೃಷಭ: ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಪ್ರಭಾವ ಕಂಡುಬರಲಿದೆ. ಮಾನಸಿಕ ಅಸ್ಥಿರತೆ, ಉದ್ವೇಗ ಸ್ಥಿತಿಗೆ ಕಾರಣವಾಗಲಿದೆ. ಸಾಮಾಜಿಕ ಸ್ತರದಲ್ಲಿ ರಾಜಕೀಯ ವಲಯದಲ್ಲಿ ಆಗಾಗ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಶುಭವಿದೆ.

ಮಿಥುನ: ಕಾರ್ಯರಂಗದಲ್ಲಿ ಹೊಸ ಜನರು ನಿಮ್ಮನ್ನು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ಸದುಪಯೋಗಿಸಿ ಕೊಳ್ಳಿರಿ. ವ್ಯಾಪಾರ, ವ್ಯವಹಾರದಲ್ಲಿ ಯಾರನ್ನೂ ನಂಬದಂತಹ ಪರಿಸ್ಥಿತಿಯು ಎದುರಾಗಲಿದೆ. ಹೆದರದಿರಿ.

ಕರ್ಕ: ನಿಮಗೆ ನಿಮ್ಮ ಹಿತಶತ್ರುಗಳು ಅನೇಕ ರೀತಿಯಲ್ಲಿ ಕಿರುಕುಳ ನೀಡಿಯಾರು. ಬಿಡುವಿನ ಸಮಯದಲ್ಲಿ ಕೆಲವೊಂದು ವಿಚಾರಗಳಲ್ಲಿ ಆದಾಯ ತರುವ ನಿರ್ಧಿಷ್ಟ ಕೆಲಸ ಕಾರ್ಯಗಳಲ್ಲಿ ನೀವು ತೊಡಗಿಸಿಕೊಂಡರೆ ಲಾಭವಿದೆ.

Advertisement

ಸಿಂಹ: ವಿದ್ಯಾರ್ಥಿಗಳಿಗಂತೂ ಏಕಾಗ್ರತೆಯೇ ಇಲ್ಲವಾದೀತು. ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗ್ರತೆ ಮಾಡಿದರೆ ಉತ್ತಮ. ವೃತ್ತಿರಂಗದಲ್ಲಿ ಎಚ್ಚರಿಕೆಯ ನಡೆಯು ನಿಮ್ಮದಾಗಿರಲಿ. ಸಾಂಸಾರಿಕವಾಗಿ ತೃಪ್ತಿ ಇದ್ದರೂ ಸಮಾಧಾನವಿಲ್ಲ.

ಕನ್ಯಾ: ರಾಜಕೀಯದವರಿಗೆ ಯಶಸ್ಸು ತೋರಿಬರುವುದು. ಯೋಗ್ಯ ವಯಸ್ಕರಿಗೆ ಸ್ವಲ್ಪ ಪ್ರಯತ್ನಪಟ್ಟಲ್ಲಿ ಒಳ್ಳೆಯ ನೆಂಟಸ್ತಿಕೆಯು ಕೂಡಿ ಬರಲಿದೆ. ಪ್ರಯತ್ನ ಬಲದಿಂದ ಹಿಡಿದ ಕೆಲಸ ಕಾರ್ಯಗಳನ್ನು ಸಾಧಿಸಿರಿ.

ತುಲಾ: ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕ ವಾದ ಅನುಕೂಲವಾಗಲಿದೆ. ದೂರ ಸಂಚಾರ ಕಂಡುಬಂದರೂ ಕಾರ್ಯಾನುಕೂಲವಾಗಲಿದೆ. ಯಾತ್ರೆ ಪ್ರವಾಸವು ಕೂಡಿಬರಲಿದೆ. ಗೆಳೆಯರ ಭೇಟಿಯಿಂದ ಸಮಾಧಾನವಿದೆ.

ವೃಶ್ಚಿಕ: ಕೆಲವೊಂದು ಅಶುಭ ಗ್ರಹಗಳ ನಡೆಯ ಸಂದರ್ಭದಿಂದ ತುಸುಮಟ್ಟಿನ ಏರುಪೇರುಗಳು ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿಯು ಕಂಡುಬರಲಿದೆ. ಗೃಹದಲ್ಲಿ ಸಂತೋಷ, ಸುಖಗಳಿವೆ.

ಧನು: ಆರೋಗ್ಯದಲ್ಲಿ ಅಲರ್ಜಿಯ ಪೀಡೆಯು ಕಂಡುಬರಲಿದೆ. ಸರಕಾರೀ ಉದ್ಯೋಗಿಗಳಿಗೆ ಮುನ್ನಡೆ ಕಂಡು ಬರುವುದು. ಬಾಳಸಂಗಾತಿಯ ಕಿರಿಕಿರಿಗಳು ಆಗಾಗ ತಲೆ ತಿನ್ನಲಿವೆ. ಕೆಲವೊಂದು ಸಮಸ್ಯೆಗಳು ಎದುರಾಗಲಿದೆ.

ಮಕರ: ಸಂಸಾರದಲ್ಲಿ ಶಾಂತಿ, ಸಮಾಧಾನಗಳು ಗೋಚರಕ್ಕೆ ಬಂದೀತು. ಸಣ್ಣಪುಟ್ಟ ಬಂಡವಾಳದವರಿಗೆ ಆರ್ಥಿಕ ಲಾಭವಿರುತ್ತದೆ. ಮಕ್ಕಳಿಂದ ತುಸು ಕಿರಿಕಿರಿ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಪ್ರಯತ್ನ ಬೇಕು.

ಕುಂಭ: ಕುಟುಂಬದಲ್ಲಿ ಕಂಡುಬಂದ ಬಿರುಕುಗಳು ಪುನಃಹ ಜೋಡಣೆಯಾಗಲಿದೆ. ಮನಸ್ಸು ಸಮಾಧಾನ ಸ್ಥಿತಿಗೆ ಬರುವುದು. ಹೆಚ್ಚಿನ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡುಬಂದೀತು.

ಮೀನ: ಚಿಂತಿತ ಕಾರ್ಯಗಳನ್ನು ಚಾಲನೆಗೊಳಿಸಲು ಸಕಾಲವಿದು ಕೋರ್ಟು ಕಚೇರಿ ವ್ಯವಹಾರಗಳು ನಿಮ್ಮ ಪರವಾಗಿಯೇ ವಾಲಿಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಗಳಲ್ಲಿ ಮಹತ್ತರ ಜಿಗಿತವು ಕಂಡುಬಂದು ಸಂತಸವಾದೀತು.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next