Advertisement

ಇಂದಿನ ಗ್ರಹಬಲ: ಈ ರಾಶಿಯ ಸಂದರ್ಶನ ನಿರುದ್ಯೋಗಿಗಳಿಗೆ ಕಿರಿಕಿರಿಯಿಂದ ಬೇಸರ ತರಲಿದೆ.

08:04 AM Mar 27, 2021 | Team Udayavani |

27-03-2021

Advertisement

ಮೇಷ: ಕೌಟುಂಬಿಕವಾಗಿ ಉತ್ತಮ ಸಹಕಾರ ಕೊಡುತ್ತಿದ್ದ ಹಿರಿಯರು ಕ್ರಮೇಣ ದೂರ ಸರಿದಾರು. ವ್ಯಾಪಾರ ವ್ಯವಹಾರದಲ್ಲಿ ಹೇಳಿಕೊಳ್ಳುವಷ್ಟು ಲಾಭವಿದ್ದರೂ ತೃಪ್ತಿ ಇರದು. ಮನಸ್ಸಿನ ನೆಮ್ಮದಿಗಾಗಿ ಯಾತ್ರೆ ಸಂಭವ.

ವೃಷಭ: ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಫ‌ಲಗಳಿಂದ ಸಂಭ್ರಮ ತಂದೀತು. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಸಾಮಾಜಿಕವಾಗಿ ಪ್ರಶಂಸೆ ಕೇಳಿ ಬಂದೀತು. ವೈಯಕ್ತಿಕವಾಗಿ ಹೆಸರಿಗೆ ಕೆಸರೆರೆಚುವ ಪ್ರಸಂಗ ನಡೆದೀತು.

ಮಿಥುನ: ಕಲೆ, ಸಂಗೀತ, ಚಿತ್ರ ಜಗತ್ತಿನಲ್ಲಿ ಆರ್ಥಿಕವಾಗಿ ಲಾಭದಾಯಕವೇ ಆದೀತು. ಸರಕಾರೀ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ಶುಭಕಾರ್ಯಕ್ಕಾಗಿ ಚಿನ್ನ, ಬೆಳ್ಳಿಯ ಖರೀದಿ ನಡೆದು ಖರ್ಚು ಆದರೂ ಸಂತಸವಿರುತ್ತದೆ.

ಕರ್ಕ: ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆಯಿಂದ ಸಮಾಧಾನವಿದೆ. ಆರೋಗ್ಯದಲ್ಲಿ ಶೀತ, ಪಿತ್ತೋಷ್ಣ ಪ್ರಕೋಪ ತಂದೀತು. ಕೌಟುಂಬಿಕವಾಗಿ ಸಹೋದರ ವರ್ಗದಲ್ಲಿ ಮನಸ್ತಾಪಕ್ಕೆ ಕಾರಣವಾದೀತು. ಅತಿಥಿಗಳು ಬಂದಾರು.

Advertisement

ಸಿಂಹ: ವಿತ್ತ ಖಾತೆ, ಜೀವವಿಮೆ ವರ್ಗದಲ್ಲಿ ಶೇರು, ಲಾಟರಿಯಲ್ಲಿ ತುಸುಮಟ್ಟಿನ ಚೇತರಿಕೆಯಿಂದ ಜೀವಕಳೆ ತುಂಬಲಿದೆ. ಆದರೂ ಜಾಗ್ರತೆ ವಹಿಸಬೇಕಾದೀತು. ಸಂದರ್ಶನ ಕಿರಿಕಿರಿಯಿಂದ ನಿರುದ್ಯೋಗಿಗಳಿಗೆ ಬೇಸರ ತರಲಿದೆ.

ಕನ್ಯಾ: ಅನಿರೀಕ್ಷಿತ, ತಾತ್ಕಾಲಿಕ ಉದ್ಯೋಗವು ದೊರೆತು ಸಮಾಧಾನ ಹಾಗೂ ಲಾಭವಾದೀತು. ಮಕ್ಕಳೊಂದಿಗೆ ವಿರಸ ಕಂಡುಬಂದೀತು. ಪ್ರೀತಿ, ವಿಶ್ವಾಸದಿಂದ ವರ್ತಿಸಿರಿ. ನಿಮ್ಮ ಒರಟು ವರ್ತನೆ ಇತರರಿಗೆ ಸಹ್ಯವಾಗುವುದಿಲ್ಲ.

ತುಲಾ: ಪರಿವರ್ತನೆಯ ಕಾಲಚಕ್ರದ ಅನುಭವ ವಾಗಲಿದೆ. ಶತ್ರುಗಳ ಕಾಟ, ವಿರೋಧಗಳು ತಣ್ಣಗಾಗ ಲಿದೆ. ನಿಮ್ಮಿಷ್ಟದಂತೆ ಚಿಂತಿತ ಕಾರ್ಯಗಳು, ವಿಚಾರ ಗಳು ಕಾರ್ಯಗತವಾಗಿ ಫ‌ಲ ನೀಡಲಿದೆ. ಯಾತ್ರಾದಿಗಳು ಕೂಡಿಬರಲಿದೆ.

ವೃಶ್ಚಿಕ: ಋಣಭಾರದ ಚಿಂತೆ ಪರಿಹಾರವಾಗಲಿದೆ. ಯಾತ್ರೆ, ದೇವತಾ ಕಾರ್ಯಗಳು ನಡೆದೀತು. ಅವಿರತ ಕಾರ್ಯದೊತ್ತಡದಿಂದ ದೇಹಾಯಾಸ ತಂದೀತು. ನೂತನ ಮಿತ್ರರ ಭೇಟಿಯಿಂದ ಕಾರ್ಯಸಾಧನೆ ಸಾಧ್ಯವಾಗಲಿದೆ.

ಧನು: ಸ್ವ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ಫ‌ಲ ಸಿಗದು. ಆರ್ಥಿಕವಾಗಿ ಆಕಸ್ಮಿಕ ಧನಪ್ರಾಪ್ತಿಯಿಂದ ಕೊಂಚ ನೆಮ್ಮದಿ ತರಲಿದೆ. ಕಾರ್ಯಕ್ಷೇತ್ರದಲ್ಲಿ ಹಲವು ವಿರುದ್ಧ ಗಳು ಗಂಭೀರ ಸ್ವಭಾವ, ಸ್ವಾಭಿಮಾನಿಗಳಾದ ನಿಮಗೆ ಅಚ್ಚರಿ ತಂದೀತು.

ಮಕರ: ಅನೇಕ ವಿರುದ್ಧಗಳ ನಡುವೆಯೂ ನಿಮ್ಮ ಕಾರ್ಯದಲ್ಲಿ ಜಯವಿದೆ. ಕೌಟುಂಬಿಕವಾಗಿ ಖರ್ಚು ವೆಚ್ಚಗಳು ಅಧಿಕವಾದಾವು. ಅವಿವಾಹಿತರ ವಿವಾಹದ ಬಗ್ಗೆ ಮಾತುಕತೆಗೆ ಹೆಚ್ಚಿನ ಪ್ರಯತ್ನ ಅಗತ್ಯವಿರುತ್ತದೆ. ಮುನ್ನಡೆಯಿರಿ.

ಕುಂಭ: ಹೊಸ ಉದ್ಯೋಗಿಗಳಿಗೆ ಅವಿರತ ದುಡಿಮೆಯ ಬಿಸಿ ತಟ್ಟಲಿದೆ. ಕೆಲವೊಮ್ಮೆ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಆಶ್ಚರ್ಯ ಹುಟ್ಟಲಿದೆ. ಅಧಿಕಾರಿ ವರ್ಗದ ವಿರೋಧ, ಹಿರಿಯರ ಅಪಸ್ವರದ ನಡುವೆ ಮಡದಿ ಆಪ್ತಳಾದಾಳು.

ಮೀನ: ಧನಾದಾಯಕ್ಕೆ ವಿಳಂಬವಾದೀತು. ಮಾತು ಕಠಿಣವಾದೀತು. ನಾಲಗೆಯಲ್ಲಿ ಹಿಡಿತವಿರಲಿ. ಸ್ವತಂತ್ರ ವ್ಯವಹಾರಕ್ಕೆ ಸದ್ಯ ಉತ್ತಮ ಕಾಲವಲ್ಲ. ಗೃಹದಲ್ಲಿ ಶಾಂತಿ, ಸಮಾಧಾನಕ್ಕಾಗಿ ಗೃಹಿಣಿಯ ಸಲಹೆ, ಸೂಚನೆಗೆ ಬೆಲೆ ಕೊಡಿರಿ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next