Advertisement

ಯುವತಿಯ ಕೊಲೆ ಪ್ರಕರಣ: ಸಿಗದ ಸುಳಿವು

01:00 AM Mar 13, 2019 | Team Udayavani |

ಉಡುಪಿ: ಮಣಿಪಾಲ ಸಮೀಪದ ಸಗ್ರಿಯ ಹಾಡಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿರುವ ಪ್ರಕರಣ ಕಗ್ಗಂಟಾಗಿಯೇ ಉಳಿದಿದೆ. ಮಂಗಳವಾರ ಕೂಡ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.  ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅತ್ಯಾಚಾರ ನಡೆದಿದೆಯೇ ಇಲ್ಲವೆ ಎಂದು  ದೃಢಪಡಿಸಿಕೊಳ್ಳಲು  ವರದಿಯನ್ನು ನಿರೀಕ್ಷಿಸುತ್ತಿದ್ದಾರೆ. ಬಾದಾಮಿ ತಾಲೂಕಿನವಳಾಗಿದ್ದು ಉಡುಪಿಯ ಅಂಗಡಿ ಯೊಂದರಲ್ಲಿ ಕೆಲಸಕ್ಕಿದ್ದ 17 ವರ್ಷದ ಯುವತಿಯ ಶವ ರವಿವಾರ ಸಂಜೆ ಪತ್ತೆಯಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next