Advertisement

ಯುವಕರೇ ಜನಪದ ಪಸರಿಸುವ ರಾಯಭಾರಿಗಳು

12:53 PM Jan 23, 2022 | Team Udayavani |

ಬೀದರ: ಯುವಕರು ಜನಪದ ಸಂಸ್ಕೃತಿ ಪಸರಿಸುವ ರಾಯಭಾರಿಗಳು. ಪ್ರತಿಯೊಬ್ಬರು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಿ ಜನಪದ ಶಾಶ್ವತವಾಗಿ ಉಳಿಸುವ ಸಂಕಲ್ಪ ತೊಡಬೇಕೆಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ| ಡಿ.ಬಿ ನಾಯಕ ಕರೆ ನೀಡಿದರು.

Advertisement

ನಗರದಲ್ಲಿ ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಜಾನಪದ ಪರಿಷತ್‌ ಹಾಗೂ ಜನಪದ ವಿವಿ ಪ್ರಾದೇಶಿಕ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಗಲಿ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಕಲೆಗಳಿಗೆ ಆಧುನಿಕ ಸ್ಪರ್ಶ ನೀಡಿ ಜನಪದ ಸಂಸ್ಕೃತಿಯನ್ನು ದೇಶಾದ್ಯಂತ ಪಸರಿಸುವ ನಿಟ್ಟಿನಲ್ಲಿ ಗೊಟಗೊಡಿಯಲ್ಲಿ ಜನಪದ ವಿವಿ ಸ್ಥಾಪಿಸಲಾಗಿದೆ. ಇದು ಜಗತ್ತಿನ ಏಕೈಕ ಜನಪದ ವಿಶ್ವವಿದ್ಯಾಲಯವಾಗಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಜಾನಪದ ಪರಿಷತ್‌ ಹಾಗೂ ಜನಪದ ವಿವಿ ಕೇಂದ್ರವು ಜಿಲ್ಲೆಯಲ್ಲಿ ರಚನಾತ್ಮಕ ಕಾರ್ಯ ಮಾಡುತ್ತಿದೆ. ಹಲವಾರು ಸಮ್ಮೇಳನಗಳು, ತರಬೇತಿ ಶಿಬಿರಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಜನಪದ ಸಂಸ್ಕೃತಿ ತಿಳಿಸುವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಅಧ್ಯಯನ ಕೇಂದ್ರದ ಏಳ್ಗೆಗೆ ಸರ್ಕಾರ ಇನ್ನಷ್ಟು ಪ್ರೋತ್ಸಾಹ ನೀಡಬೇಕಾಗಿದೆ. ಸರ್ಕಾರ ಈಗಾಗಲೇ ಕಮಠಾಣಾ ಹತ್ತಿರ ಜಾನಪದ ವಿವಿ ನಿರ್ಮಿಸಲು ಐದು ಎಕರೆ ಜಮೀನು ನೀಡಿ ಪ್ರೋತ್ಸಾಹಿಸಿದೆ. ಶೀಘ್ರವೇ ಅನುದಾನ ನೀಡಿ ಸಹಕರಿಸಿದರೆ ಜಿಲ್ಲೆಯಲ್ಲಿ ಜನಪದ ಸಂಸ್ಕೃತಿ ಉಳಿಸಲು ಇನ್ನಷ್ಟು ಸಹಕಾರವಾಗುತ್ತದೆ ಎಂದರು.

ಈ ವೇಳೆ ಜಾನಪದ ಪರಿಷತ್‌ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಶಾಂತಕುಮಾರ ಪಾಟೀಲ, ನಿಜಲಿಂಗಪ್ಪ ತಗಾರೆ, ಮಲ್ಲಿಕಾರ್ಜುನ ಸ್ವಾಮಿ, ಎಸ್‌.ಬಿ ಕುಚಬಾಳ, ಡಾ| ರಾಜಕುಮಾರ ಹೆಬ್ಟಾಳೆ ವೇದಿಕೆಯಲ್ಲಿದ್ದರು. ಸಂಗೀತಾ ಕಾಂಬಳೆ, ದೇವಿದಾಸ್‌ ಚಿಮಕೋಡೆ ಹಾಗೂ ಸಂಗಡಿಗರಿಂದ ಜನಪದ ಗೀತ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಸಂಜೀವಕುಮಾರ ಸ್ವಾಮಿ, ಡಾ| ನಂದಕುಮಾರ ತಾಂದಳೆ, ಧನರಾಜ ಆನೆಕಲೆ, ಬಸವರಾಜ ಹೆಗ್ಗೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next