Advertisement

ಕುಂಬಳೆ: ದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಯುವಕ ಸಾವು

06:07 PM Aug 11, 2022 | Team Udayavani |

ಕುಂಬಳೆ: ಬೋವಿಕಾನದ ಕುಟ್ಟಿಕೋಲು ಶಂಕರಪಾಡಿ ಕುಳಿಯಾನ್‌ಕಲ್ಲಿನ ಎಂ. ದಾಮೋದರನ್‌ ನಾಯರ್‌ ಪುತ್ರ ಸದ್ಗೀತ್‌(31) ಬೋವಿಕಾನ ಚಿಪ್ಲಿಕಯಲ್ಲಿ ರಾತ್ರಿ ರಸ್ತೆಯಲ್ಲಿ ತನ್ನ ದೇಹಕ್ಕೆ  ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಮೃತರಾಗಿದ್ದಾರೆ.

Advertisement

ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ  ಸಾಗುತ್ತಿದ್ದ ಓರ್ವರು ಇದನ್ನು ಕಂಡು ಹತ್ತಿರದವರಿಗೆ ತಿಳಿಸಿ ಅವರು ಧಾವಿಸಿ ಬಂದಾಗುವಷ್ಟರಲ್ಲಿ ಯುವಕ  ಸಾವಿಗೀಡಾಗಿದ್ದರು. ಆದೂರು ಪೊಲೀಸರು ಘಟನೆಯ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.

ಸಾವಿಗೀಡಾದ ಯುವಕ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದು, ಒಂದು ವರ್ಷದ ಹಿಂದೆ ಊರಿಗೆ ಬಂದಿದ್ದರು. ಈತ ಆರ್ಥಿಕ ಮುಗ್ಗಟ್ಟಿನಿಂದ ಕೊರಗುತ್ತಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next