Advertisement

ಬಸ್‌ನಲ್ಲಿ ಬಂದ ಯುವಕನಿಗೆ ಸೋಂಕು

06:55 AM Jun 07, 2020 | Team Udayavani |

ಬೀದರ: ಬೆಂಗಳೂರಿನಿಂದ ಬೀದರಗೆ ಸಾರಿಗೆ ಬಸ್‌ನಲ್ಲಿ ಆಗಮಿಸಿರುವ ಔರಾದ ತಾಲೂಕು ಸಾವಳಿ ಗ್ರಾಮದ ಯುವಕನೊಬ್ಬನಿಗೆ ಕೋವಿಡ್ ಸೋಂಕು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.

Advertisement

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಈ ಯುವಕನ ಗಂಟಲು ಮಾದರಿಯನ್ನು ಪರೀಕ್ಷೆಗೆ ಪಡೆಯಲಾಗಿತ್ತು. ನಾಲ್ಕು ಕ್ವಾರಂಟೈನ್‌ನಲ್ಲಿ ಇದ್ದ ಬಳಿಕ ಈಗ ಬಸ್‌ನಲ್ಲಿ ಬೀದರಗೆ ಬಂದಿದ್ದಾನೆ. ನಂತರ ಸ್ವ ಇಚ್ಛೆಯಿಂದ ಮತ್ತೂಮ್ಮೆ ಗಂಟಲು ಮಾದರಿಯನ್ನು ಪರೀಕ್ಷೆಗೆ ನೀಡಿದ್ದಾನೆ. ಇದೀಗ ಬೆಂಗಳೂರಿನಲ್ಲಿ ನೀಡಿದ್ದ ಹಾಗೂ ಬೀದರನಲ್ಲಿ ನೀಡಿದ್ದ ಎರಡೂ ಸ್ಯಾಂಪಲ್‌ ಪಾಸಿಟಿವ್‌ ಬಂದಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಈ ಯುವಕ ಬೀದರನ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗಾಗಲೇ ಬಸ್‌ ಚಾಲಕ ಮತ್ತು ನಿರ್ವಾಹಕರನ್ನು ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿಬ್‌ ಬಂದಿದೆ. ಆದರೆ, ಬೆಂಗಳೂರಿನಿಂದ ಬಸ್‌ನಲ್ಲಿ ಪ್ರಯಾಣಿಸಿರುವ ಸಹ ಪ್ರಯಾಣಿಕರಿಗೆ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಅವರನ್ನು ಪತ್ತೆ ಹಚ್ಚು ಕೆಲಸ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next