Advertisement

Kunigal ಬೈಕ್‌ನಿಂದ ಬಿದ್ದು ಯುವಕ ಸಾವು

08:59 PM Aug 05, 2023 | Team Udayavani |

ಕುಣಿಗಲ್‌: ಜಿಯೋ ಕಂಪನಿ ಟೆಕ್ನಿಷಯನ್‌ನೊಬ್ಬ ಬೈಕಿನಲ್ಲಿ ಬರುತ್ತಿದ್ದ ವೇಳೆ ಆಯತಪ್ಪಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆಗ್ಗಡತಿಹಳ್ಳಿ ಸಂತೇಮಾವತ್ತೂರು ಮುಖ್ಯರಸ್ತೆ ಮೊದೂರು ಗ್ರಾಮದ ಸಮೀಪ ಶುಕ್ರವಾರ ರಾತ್ರಿ ನಡೆದಿದೆ.

Advertisement

ಮೂಲತಃ ತಾಲೂಕಿನ ಎಡಿಯೂರು ಹೋಬಳಿ ಅಡೋನಹಳ್ಳಿ ಗ್ರಾಮ ಹಾಲಿ ಪಟ್ಟಣದ ಹೌಸಿಂಗ್‌ ವಾಸಿ ಹರ್ಷಿತ್‌ಗೌಡ (32)ಮೃತ ದುರ್ದೈವಿ.

ತಾಲೂಕಿನ ಹೆಗ್ಗಡತಿ ಹಳ್ಳಿ ಗ್ರಾಮದ ಬಳಿಯ ಟವರ್‌ನಲ್ಲಿ ತಾಂತ್ರಿಕ ದೋಷ ಇದ್ದ ಕಾರಣ ಟವರ್‌ ಸರ್ವಿಸ್‌ ಮಾಡಲು ಹರ್ಷಿತ್‌ಗೌಡ ಶುಕ್ರವಾರ ರಾತ್ರಿ ಹೆಗ್ಗಡತಿಹಳ್ಳಿಗೆ ಹೋಗಿ ಕೆಲಸ ಮುಗಿಸಿಕೊಂಡು ಕುಣಿಗಲ್‌ಗೆ ವಾಪಸ್‌ ಆಗುತ್ತಿದ್ದ ವೇಳೆ ಮೊದೂರು ಸಮೀಪ ಅಯತಪ್ಪಿ ಬೈಕ್‌ನಿಂದ ಬಿದ್ದಿದ್ದಾನೆ.

ತಲೆಗೆ ತೀವ್ರವಾಗಿ ಪೆಟ್ಟಾಗಿದೆ. ರಾತ್ರಿಯಾದ್ದರಿಂದ ಯಾರು ಕೂಡ ಇತ ಬಿದ್ದರುವುದನ್ನು ಗಮನಿಸಿಲ್ಲ. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಬೆಳಗ್ಗೆ ಯಾರೋ ನೋಡಿ ಕುಣಿಗಲ್‌ ಆಸ್ಪತ್ರೆಗೆ ಸಾಗಿಸಿದ್ದಾರೆ.

ಹುಲಿಯೂರುದುರ್ಗ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next