Advertisement

ಭಟ್ಕಳ: ಮನೆಗೆ ಹೋಗುವಾಗ ಬೈಕ್‌ ಸ್ಕಿಡ್‌; ತೀವ್ರ ರಕ್ತಸ್ರಾವವಾಗಿ ಹೋಟೆಲ್‌ ಉದ್ಯಮಿ ಸಾವು

02:18 PM Jun 12, 2022 | Team Udayavani |

ಭಟ್ಕಳ: ಮನೆಗೆ ಹೋಗುವ ದಾರಿಯಲ್ಲಿ ಬೈಕ್‌ ಸ್ಕಿಡ್ ಆಗಿ ತೀವ್ರ ರಕ್ತಸ್ರಾವದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

Advertisement

ಮುರ್ಡೇಶ್ವರದ ಗುಮ್ಮನಹಕ್ಕಲ ನಿವಾಸಿ ಹೋಟೆಲ್ ಉದ್ಯಮಿ ದಿನೇಶ ಈರಪ್ಪ ನಾಯ್ಕ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಘಟನೆ ಹೇಗಾಯಿತು ? :

ದಿನೇಶ ಈರಪ್ಪ ನಾಯ್ಕ ಬೈಕಿನಲ್ಲಿ ಮುರ್ಡೇಶ್ವರದಿಂದ ಗುಮ್ಮನಹಕ್ಕಲಿನಲ್ಲಿರುವ ತನ್ನ ಮನೆಗೆ ಹೋಗುವಾಗ ದಾರಿಯಲ್ಲಿ ಬೈಕ್‌ ಸ್ಕಿಡ್‌ ಆಗಿದೆ. ಪರಿಣಾಮ ಕೆಳಕ್ಕೆ ದಿನೇಶ್‌ ಅವರ ತಲೆಗೆ ತೀವ್ರ ತರದ ಏಟಾಗಿದೆ. ತಡರಾತ್ರಿ ಆದ ಕಾರಣ ದಾರಿಯಲ್ಲಿ ಯಾರೂ ಇಲ್ಲದಿರುವುದಕ್ಕೆ ರಕ್ರಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

 ಇದನ್ನೂ ಓದಿ: ಅನ್ಯಜಾತಿ ಯುವತಿಯ ಮದುವೆಯಾದ ಪುತ್ರ: ಹಲ್ಲೆಗೊಳಗಾಗಿ ಪ್ರಾಣ ತೆತ್ತ ತಂದೆ!

Advertisement

ರವಿವಾರ ಬೆಳಗ್ಗೆ 7 ಗಂಟೆಯ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು, ದಿನೇಶ್‌ ನನ್ನು ನೋಡಿ ಕೂಡಲೇ ಠಾಣೆಗೆ ತಿಳಿಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಮೃತ ಪಟ್ಟಿರುವ ಬಗ್ಗೆ ವೈದ್ಯರು ಖಚಿತ ಪಡಿಸಿದ್ದಾರೆ.

ನಂತರ ಮುರ್ಡೇಶ್ವರದಲ್ಲಿಯೇ ಶವಪರೀಕ್ಷೆಯನ್ನು ನಡೆಸಲಾಯಿತು. ಈ ಕುರಿತು ದಿನೇಶ್ ಸಹೋದರ ಶ್ರೀಧರ ಮೋಹನ ನಾಯ್ಕ ಎನ್ನುವವರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು‌, ಅಪಫಾತದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next