Advertisement

ಜೀವನದಲ್ಲಿ ಜಿಗುಪ್ಸೆ: ವಿವಾಹಿತ ಯುವಕ ಆತ್ಮಹತ್ಯೆ

02:29 PM Dec 10, 2021 | Shwetha M |

ಮುದ್ದೇಬಿಹಾಳ: ಇಬ್ಬರು ಮಕ್ಕಳ ತಂದೆಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಇರುವ ತಾಲೂಕು ಪಂಚಾಯಿತಿಯ ಹಳೇ ಕ್ವಾಟ್ರಸನಲ್ಲಿ ಬೆಳಕಿಗೆ ಬಂದಿದೆ.

Advertisement

ಆತ್ಮಹತ್ಯೆ ಮಾಡಿಕೊಂಡವನನ್ನು ಗಣೇಶ ನಗರದ ಗಿರಿಜಾಶಂಕರ ಚಿತ್ರಮಂದಿರ ಏರಿಯಾ ನಿವಾಸಿ ವೀರೇಶ ಯಮನಯ್ಯ ಚಿಮ್ಮಲಗಿ (ಆಲಿಮಟ್ಟಿ) (32) ಎಂದು ಗುರುತಿಸಲಾಗಿದೆ.

ಹೊಟೇಲ್, ಖಾನಾವಳಿಗಳಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ವಿಪರೀತ ಮದ್ಯ ಸೇವನೆ ಮೈಗೂಡಿಸಿಕೊಂಡಿದ್ದ. ನಶೆಯಲ್ಲೇ ಪ್ಲಾಸ್ಟಿಕ್ ವೈರ್ ನಿಂದ ನೇಣು ಬಿಗಿದುಕೊಂಡು ಗುರುವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಈತನಿಗೆ ಪತ್ನಿ, ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸೈ ರೇಣುಕಾ ಜಕನೂರ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಶವ ನೋಡಲು ನೂರಾರು ಜನ ಕ್ವಾಟ್ರಸ್ ಎದುರು ಜಮಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next