Advertisement

ಭರಮಸಾಗರ: ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಾಕೆ ಕೆರೆಗೆ ಹಾರಿ ಆತ್ಮಹತ್ಯೆ

12:21 PM Oct 22, 2022 | Team Udayavani |

ಭರಮಸಾಗರ: ಇಲ್ಲಿನ ದೊಡ್ಡಕೆರೆಗೆ ಹಾರಿ ಯುವತಿಯೊರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಗ್ಗೆ (ಅ.22 ರಂದು) ನಡೆದಿದೆ.

Advertisement

ಹೆಗ್ಗೆರೆ ಗ್ರಾಮದ ರಮ್ಯ (18) ಮೃತ ಯುವತಿ. ಭರಮಸಾಗರದ ನೆಂಟರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಶನಿವಾರ ಬೆಳಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ದೊಡ್ಡಕೆರೆಗೆ  ಹೋಗಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿ ಕೆರೆಗೆ ಹಾರಿದ್ದನ್ನು ಕಂಡು ತಕ್ಷಣ ಕಾಪಾಡಲು ಮುಂದಾದ ದಾರಿಹೋಕರು ಎಷ್ಟೇ ಪ್ರಯತ್ನಪಟ್ಟರು ಯುವತಿ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ನೋಡ ನೋಡುತ್ತಿದ್ದಂತೆ ಯುವತಿ ನೀರಿಗೆ ದುಮುಕ್ಕಿದ್ದನ್ನು ಕಂಡು ಕೆರೆ ಏರಿ ಮೇಲೆ ಸಂಚರಿಸುತ್ತಿದ್ದವರು  ದಂಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next