Advertisement

ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಹಾವು ಕಚ್ಚಿ 7 ವರ್ಷದ ಬಾಲಕ ಸಾವು

11:47 AM Apr 21, 2023 | Team Udayavani |

ದೊಡ್ಡಬಳ್ಳಾಪುರ: ಮನೆಯಲ್ಲಿ ಮಲಗಿದ್ದ ವೇಳೆ ನಾಗರಹಾವು ಕಚ್ಚಿದ ಪರಿಣಾಮ, 7 ವರ್ಷದ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಬೈರಾಪುರ ತಾಂಡದಲ್ಲಿ ಸಂಭವಿಸಿದೆ.

Advertisement

ಬೈರಾಪುರ ತಾಂಡದ ಮಂಜುನಾಥ್‌ ನಾಯಕ್‌, ಸುಮಿತ್ರಾ ದಂಪತಿಯ ಎರಡನೇ ಪುತ್ರ ಮೌನಿಕ್‌ ಎಂ.ನಾಯಕ್‌ ಮೃತ ಬಾಲಕ.

ಮನೆಯ ಸಮೀಪ ಅವರದ್ದೇ ಹೊಸ ಮನೆಯಲ್ಲಿ ಬಾಲಕ ತಾಯಿ ಹಾಗೂ ಕುಟುಂಬದವರೊಡನೆ ಮೌನಿಕ್‌ ಮಲಗಿದ್ದಾಗ ಹಾವು ಕಚ್ಚಿದೆ. ಆದರೆ ಹಾವು ಕಚ್ಚಿರುವುದು ತಕ್ಷಣಕ್ಕೆ ಅರಿವಿಗೆ ಬರಲಿಲ್ಲ. ಕಚ್ಚಿದ್ದ ಹಾವು ಮನೆಯಲ್ಲಿಯೇ ಇದ್ದು, ಇತರರಿಗೆ ಹಾನಿಯಾಗುವುದು ತಪ್ಪಿದೆ. ಆ ನಂತರ ರಾತ್ರಿ 2 ಗಂಟೆ ಸುಮಾರಿಗೆ ಬಾಲಕನ ನರಳಾಟ ನೋಡಿದ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.

ಮೌನಿಕ್‌ ನಗರದ ಗುರುಕುಲ ಶಾಲೆಯಲ್ಲಿ 1ನೇ ತರಗತಿ ಉತ್ತೀರ್ಣನಾಗಿ 2ನೇ ತರಗತಿಗೆ ದಾಖಲಾಗಿದ್ದನು.

Advertisement

Udayavani is now on Telegram. Click here to join our channel and stay updated with the latest news.

Next