Advertisement

1000 ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳಿಸಿದ ಯೋಗಿ ಸರಕಾರ

09:48 AM Nov 28, 2019 | sudhir |

ಲಕ್ನೋ: ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಅಸಮರ್ಥ, ಭ್ರಷ್ಟ ಅಧಿಕಾರಿಗಳನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ಸರಕಾರ ಮನೆಗೆ ಕಳಿಸಿದೆ.

Advertisement

ಇವರು ವಿವಿಧ ಹಂತದ ಅಧಿಕಾರಿಗಳಾಗಿದ್ದು, ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಹಲವರಿದ್ದಾರೆ.

ಸಾರಿಗೆ ಇಲಾಖೆಯಿಂದ 37 ಅಧಿಕಾರಿಗಳಿಗೆ ನಿವೃತ್ತಿ ನೀಡಲಾಗಿದ್ದು, ಕಂದಾಯ ಇಲಾಖೆಯಿಂದ 36 ಮಂದಿ, ಶಿಕ್ಷಣ ಇಲಾಖೆಯಿಂದ 26 ಮಂದಿ, ಪಂಚಾಯತ್‌ ರಾಜ್‌ ಇಲಾಖೆಯಿಂದ 25 ಮಂದಿ, ಲೋಕೋಪಯೋಗಿ ಇಲಾಖೆಯಿಂದ 18 ಮಂದಿ, ಕಾರ್ಮಿಕ ಇಲಾಖೆಯಿಂದ 16 ಮಂದಿ, ವಿತ್ತ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಿಂದ 16 ಮಂದಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ. ಇವರಲ್ಲಿ ಹೆಚ್ಚಿನವರು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದು, ಕೆಲಮಂದಿ ಕೆಲಸದಲ್ಲಿ ಅಸಮರ್ಥರಾಗಿದ್ದಾರೆ ಎಂದು ಸಿಎಂ ಕಚೇರಿ ಹೇಳಿದೆ. ಕಡ್ಡಾಯ ನಿವೃತ್ತಿ ನೀಡಲಾದವರಲ್ಲಿ ದೊಡ್ಡ ಹುದ್ದೆಗಳಲ್ಲಿದ್ದ ಐಎಎಸ್‌ ಅಧಿಕಾರಿಗಳೂ ಇದ್ದಾರೆ ಎಂದು ಸಿಎಂ ಕಚೇರಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next