Advertisement

ಯೋಗಿ ಆದಿತ್ಯನಾಥ್‌ ಬಿಜೆಪಿಯ ಪ್ರಶ್ನಾತೀತ ನಾಯಕ : ಬಿ.ಎಲ್‌.ಸಂತೋಷ್‌

08:32 PM Jun 02, 2021 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ ಕೊರೊನಾ ನಿರ್ವಹಿಸಲು ಯೋಗಿ ಆದಿತ್ಯನಾಥ್‌ ಸರ್ಕಾರ ವಿಫ‌ಲವಾಗಿದೆ ಎಂಬ ಟೀಕೆಗಳು ಜೋರಾಗಿಯೇ ಇವೆ. ಇದರ ಮಧ್ಯೆಯೇ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಆದಿತ್ಯನಾಥ್‌ ಸ್ಥಾನಕ್ಕೆ ಕಿಂಚಿತ್ತೂ ಧಕ್ಕೆಯಿಲ್ಲ.

Advertisement

ಆ ರಾಜ್ಯದಲ್ಲಿ ಅವರೇ ಬಿಜೆಪಿಯ ಪ್ರಶ್ನಾತೀತ ನಾಯಕ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಖಚಿತಪಡಿಸಿದ್ದಾರೆ.

ಕೊರೊನಾವನ್ನು ಯೋಗಿ ಸರಿಯಾಗಿಯೇ ನಿಭಾಯಿಸಿದ್ದಾರೆ, ಪ್ರಾಮಾಣಿಕವಾಗಿ ದುಡಿದಿದ್ದಾರೆ ಎಂದು ಉತ್ತರಪ್ರದೇಶ ಬಿಜೆಪಿ ನಾಯಕರು, ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಂತೋಷ್‌ ತೀರ್ಮಾನಿಸಿದ್ದಾರೆ. ಆದರೆ ಉತ್ತರಪ್ರದೇಶ ಸಚಿವಸಂಪುಟದಲ್ಲಿ, ರಾಜ್ಯದ ಪಕ್ಷದ ಘಟಕದಲ್ಲಿ ಪ್ರಮುಖ ಬದಲಾವಣೆಗಳಾಗುವುದು ಖಚಿತ ಎಂದು ಮೂಲಗಳು ಹೇಳಿವೆ. ಅದೀಗ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಬ್ರಿಟನ್ ರಾಣಿಯ ಆಳ್ವಿಕೆಗೆ 70 ವರ್ಷ:ಪ್ಲ್ಯಾಟಿನಮ್ ಸಡಗರಕ್ಕೆ ಬಕಿಂಗ್ಹ್ಯಾಮ್ ಅರಮನೆ ಸಿದ್ಧತೆ

Advertisement

Udayavani is now on Telegram. Click here to join our channel and stay updated with the latest news.

Next