Advertisement

ByPolls; ಕಾಂಗ್ರೆಸ್‌ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

02:23 PM Oct 21, 2024 | Team Udayavani |

ಚಿತ್ರದುರ್ಗ: ರಾಜ್ಯದ ಮೂರು ಉಪ ಚುನಾಚಣೆಗಳಿಗೆ ಇಂದು (ಅ.21) ರಾತ್ರಿ ಅಥವಾ ನಾಳೆ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಮೂರು ಕ್ಷೇತ್ರವೂ ಗೆಲ್ಲುವ ಭರವಸೆಯಿಂದ ಇದ್ದೇವೆ. ಸಿಪಿ ಯೋಗೀಶ್ವರ ನಮ್ಮ ಸಂಪರ್ಕದಲ್ಲಿಲ್ಲ ಎಂದು ಚಳ್ಳಕೆರೆ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಅಹಿಂದ ವರ್ಗದ ಹಣ ಲೂಟಿ ಎಂಬ ಯತ್ನಾಳ್ ಹೇಳಿಕೆಗೆ ಟಾಂಗ್‌ ನೀಡಿದ ಅವರು, ಒಂದು ಸಾವಿರ ಕೋಟಿ ಕೊಟ್ಟರೇ ಸಿಎಂ ಆಗುತ್ತಾರೆ ಎಂದು ಹೇಳಿದ್ಯಾರು. ಹಾಗಾದರೆ ಒಂದು ಸಾವಿರ ಕೋಟಿ ಯಾವ ದುಡ್ಡು? ಕಪ್ಪು ಹಣ ಇರಬೇಕಲ್ವಾ? ಯತ್ನಾಳ್ ಹತ್ತು, ಐದು ಕೋಟಿ ಮಾತಾಡಲ್ಲ, ಬರೀ ಸಾವಿರ ಕೋಟಿ ಮಾತಾಡ್ತಾರೆ. ನಮ್ಮ ಸರ್ಕಾರ ಕೆಡವಲು ಯತ್ನಾಳ್ ಎಲ್ಲಿಂದ ಹಣ ತರುತ್ತಾರೆ. ಬ್ಲಾಕ್ ಮನಿ ಮಾಡಿದವರು ಕೂಡಾ ಬಿಜೆಪಿಯವರೇ ಅಲ್ಲವೇ ಎಂದರು.

ರಾಜ್ಯದಲ್ಲಿ ಭೀಕರ ಮಳೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಬಂಗಾರ ಕೊಲ್ಲಿಯಲ್ಲಿ ವಾಯು ಭಾರತ ಕುಸಿತ ಉಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಉತ್ತಮ ಮಳೆ ಸುರಿಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next