Advertisement

ವಿಶ್ವನಾಥ್‌ ಸೋಲಿಗೆ ಯೋಗೇಶ್ವರ್‌ ಕಾರಣ

11:27 PM Dec 11, 2019 | Team Udayavani |

ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಸೋಲಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕಾರಣ ಎಂದು ಶಾಸಕ ಜಿ.ಟಿ.ದೇವೇಗೌಡ ದೂರಿದ್ದಾರೆ. ತಾಲೂಕಿನ ಜಯಪುರದಲ್ಲಿ ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಯೋಗೇಶ್ವರ್‌ ಅವರು ಸಮು ದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್‌ ವಿರುದ್ಧ ತಿರುಗಿ ಬಿದ್ದರು. ದುಡ್ಡು, ಸೀರೆ, ಕುಕ್ಕರ್‌ ಹಂಚಿ ಚುನಾವಣೆ ಗೆಲ್ಲುತ್ತೇವೆ ಎಂಬ ಹುಂಬತನ ಅವರಲ್ಲಿತ್ತು.

Advertisement

5 ಕೋಟಿ ರೂ.ಆಮಿಷ ತೋರಿಸಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನವನ್ನೂ ಮಾಡಿದರು. ಆದರೆ, ಸಾಧ್ಯವಾಗಲಿಲ್ಲ ಎಂದರು. ಕುಮಾರಣ್ಣ ಮುತ್ತಿನಂತ ಮಾತನ್ನಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಜಿ.ಟಿ.ದೇವೇ ಗೌಡನಿಗೆ ಫ್ಯೂಸ್‌ ಇಲ್ಲ ಅಂದಿದ್ದಾರೆ. ಇತ್ತೀಚೆಗೆ ಅವರಾಡುತ್ತಿರುವ ಮಾತುಗಳು ಅಭಿಮಾನಿಗಳನ್ನೇ ಕೆರಳಿಸಿದೆ. ಆಡುವ ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಇನ್ನಾದರೂ ಬದಲಾಗಲಿ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next