Advertisement

Yoga: ಮಧುಮೇಹ ನಿಯಂತ್ರಣಕ್ಕೆ ಯೋಗ, ಪ್ರಾಣಾಯಾಮ, ಧ್ಯಾನ ಸಹಕಾರಿ

08:18 AM Jun 20, 2023 | Team Udayavani |

ಪ್ರಸ್ತುತ ಮಧುಮೇಹ ಹಾಗೂ ಅಧಿಕ, ಕಡಿಮೆ ರಕ್ತದೊ ತ್ತಡ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ದೈಹಿಕ ವ್ಯಾಯಮದ ಕೊರತೆ, ಅನಿಯಮಿತ ಆಹಾರ ಪದ್ಧತಿ, ಒತ್ತಡ, ಆತಂಕ, ಖನ್ನತೆ ಪ್ರಮುಖ ಕಾರಣಗಳಾಗಿವೆ.

Advertisement

ಯೋಗ ಅಭ್ಯಾಸ ಮಾಡುವುದರಿಂದ ಖನ್ನತೆ, ಒತ್ತಡ ನಿವಾರಣೆಯಾಗಿ, ದೇಹದ ತೂಕ ಇಳಿಕೆಯಾಗುವುದರಿಂದ ಮಧುಮೇಹ ನಿಯಂತ್ರಣ ಬರುತ್ತದೆ. ಮಧುಮೇಹ ಹೊಂದಿರುವವರು ಯೋಗ ಮಾಡುವುದರಿಂದ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಯೋಗ ಒತ್ತಡವನ್ನು ನಿರ್ವಹಣೆ ಮಾಡುತ್ತದೆ. ಯೋಗ ಮಾಡುವುದರಿಂದ ಮೆದುಳಿನಲ್ಲಿ ನಿರ್ದಿಷ್ಟ ರಾಸಾಯನಿಕ ಸಮತೋಲನವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ.

ಯೋಗ, ಪ್ರಾಣಾಯಾಮ, ಧ್ಯಾನ ಅಭ್ಯಾಸವನ್ನು ನಿರಂತರ ವಾಗಿ ಮಾಡುವುದರಿಂದ ಮಧುಮೇಹಿಗಳು ಮಾತ್ರೆಯಲ್ಲಿಯೇ ಸಕ್ಕರೆ ಮಟ್ಟ ನಿಯಂತ್ರಣ ಮಾಡಿಕೊಳ್ಳ ಬಹುದಾಗಿದ್ದು, ಕೃತಕ ಇನ್ಸುಲಿನ್‌ ಪಡೆದುಕೊಳ್ಳುವ ಆವಶ್ಯಕತೆ ಬರುವುದಿಲ್ಲ. ಮಾತ್ರೆಗ‌ಳ ಅತೀಯಾಗಿ ಸೇವಿ ಸುವ ಅಗತ್ಯವೂ ಇರುವುದಿಲ್ಲ. ಪ್ರಮುಖವಾಗಿ ಮಾನಸಿಕ ಒತ್ತಡ, ಖನ್ನತೆ, ತೂಕ ಇಳಿಯು ವಿಕೆ, ಬೊಜ್ಜು ಕರಗುವುದು, ಮೊಣಕಾಲು ನೋವು, ಮೊಣಕಾಲು ಚಿಪ್ಪು ಬದಲಾವಣೆಯಂತ ಸಮಸ್ಯೆಗಳು ನಿವಾರಣೆಯಾಗಲಿವೆ.

ಮಧುಮೇಹಕ್ಕೆ ಸ್ಥೂಲಕಾಯ ಕೂಡ ಪ್ರಮುಖ ಕಾರಣವಾಗಿದ್ದು, ಯೋಗ, ಪ್ರಾಣಾಯಾಮ, ಧ್ಯಾನದ ಅಭ್ಯಾಸದಿಂದ ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ದೇಹದ ಬೊಜ್ಜು ಮತ್ತು ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮುಖ್ಯವಾಗಿ ಮಧುಮೇಹ ಹೊಂದಿರುವ ಕೆಲವು ಜನರು ನರಗಳ ಹಾನಿಯಿಂದಾಗಿ ಬಾಹ್ಯ ನರರೋಗವನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಇದು ಸ್ನಾಯುವಿನ ಶಕ್ತಿ ಮತ್ತು ಚಲನಶೀಲತೆಯ ಮೇಲೆ ಪರಿಣಾಮವನ್ನು ಬೀರಬಹುದು. ಯೋಗಾಭ್ಯಾಸದ ಮೂಲಕ ನೀವು ಶಕ್ತಿಯನ್ನು ಪಡೆಯಬಹುದಾಗಿದೆ.

Advertisement

ಟೈಪ್‌ 2 ಡಯಾಬಿಟಿಸ್‌ನಲ್ಲಿ ಯೋಗದ ಚಿಕಿತ್ಸಕ ಪಾತ್ರ: ಟೈಪ್‌ 2 ಡಯಾಬಿಟಿಸ್‌ ಸೇರಿದಂತೆ ವಿವಿಧ ಜೀವನಶೈಲಿ ರೋಗಗಳ ನಿರ್ವಹಣೆಯಲ್ಲಿ ಯೋಗಾಭ್ಯಾಸವು ಉಪಯುಕ್ತವಾಗಿದೆ. ಸೈಕೋ-ನ್ಯೂರೋ-ಎಂಡೋಕ್ರೆ„ನ್‌ ಮತ್ತು ರೋಗನಿರೋಧಕ ಕಾರ್ಯವಿಧಾನಗಳು ಮಧುಮೇಹದ ಮೇಲೆ ಯೋಗದ ಪ್ರಯೋಜನಕಾರಿ ಪರಿಣಾಮಗಳಲ್ಲಿ ತೊಡಗಿಕೊಂಡಿವೆ. ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದು ಗ್ಲೆ„ಸೆಮಿಕ್‌ ನಿಯಂತ್ರಣವನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹ ಹೊಂದಿರುವ ಜನರಲ್ಲಿ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಅನಾರೋಗ್ಯಕರ ಆಹಾರ ಪದ್ಧತಿಗಳು ಮಧುಮೇಹ ಸೇರಿದಂತೆ ವಿವಿಧ ಜೀವನಶೈಲಿ ಅಸ್ವಸ್ಥತೆಗಳ ಬೆಳವಣಿಗೆಗೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಮಾನಸಿಕ ಒತ್ತಡವು ಮಧುಮೇಹದ ಅಪಾಯ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ಮಧುಮೇಹದ ಅಪಾಯವನ್ನು 3 ಪಟ್ಟು ಹೆಚ್ಚಿಸುತ್ತದೆ ಮತ್ತು ಪರಿಧಮನಿಯ ಕಾಯಿಲೆಯ ಅಪಾಯವನ್ನು 2.4 ಪಟ್ಟು ಹೆಚ್ಚಿಸುತ್ತದೆ. ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆಗಳು, ಆಹಾರ ಪದ್ಧತಿ ಅಳವಡಿಕೆಯಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ.

ಅನ್ನದಾನಯ್ಯ ಯೋಗ ಗುರುಗಳು, ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್‌, ಮಾನ್ವಿ

 

Advertisement

Udayavani is now on Telegram. Click here to join our channel and stay updated with the latest news.

Next