Advertisement

ಮೈಸೂರಿನ ಕೈತಪ್ಪಿತೇ ಯೋಗ ಆಯೋಜನೆ ಅವಕಾಶ?

01:22 AM Jun 03, 2019 | Team Udayavani |
ನವದೆಹಲಿ: ಜೂನ್‌ 21ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ನಡೆಯುವ ಬೃಹತ್‌ ಯೋಗ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶವು ಈ ಬಾರಿಯೂ ಮೈಸೂರಿನ ಕೈತಪ್ಪಿದೆಯೇ? ಹೌದು ಎನ್ನುತ್ತಿದೆ ಕೇಂದ್ರ ಸರ್ಕಾರದ ಮೂಲಗಳು.

ಕೇಂದ್ರ ಆಯುಷ್‌ ಸಚಿವಾಲಯವು ಮೈಸೂರು, ದೆಹಲಿ, ಶಿಮ್ಲಾ, ಅಹಮದಾಬಾದ್‌ ಮತ್ತು ರಾಂಚಿ ನಗರಗಳ ಹೆಸರನ್ನು ಶಿಫಾರಸು ಮಾಡಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿತ್ತು. ಆದರೆ, ಪ್ರಧಾನಿ ಕಾರ್ಯಾಲಯವು ಈ 5 ನಗರಗಳ ಪೈಕಿ ರಾಂಚಿಯನ್ನು ಆಯ್ಕೆ ಮಾಡಿದ್ದು, ಅದೇ ನಗರದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದು ನಿಜವೆಂದಾದರೆ, ಕಳೆದ ವರ್ಷದಂತೆ ಈ ಬಾರಿಯೂ ಅರ ಮನೆಗಳ ನಗರಿ ಮೈಸೂರಿಗೆ ಅವಕಾಶ ಕೈತಪ್ಪಿದಂತಾಗಲಿದೆ.

Advertisement

ಕಳೆದ ವರ್ಷ ಯೋಗ ದಿನದ ಪ್ರಧಾನ ಕಾರ್ಯಕ್ರಮವು ಡೆಹ್ರಾಡೂನ್‌ನಲ್ಲಿ ನಡೆದಿತ್ತು. ಅದಕ್ಕೂ ಮೊದಲಿನ ವರ್ಷಗಳಲ್ಲಿ ಲಕ್ನೋ, ಚಂಡೀಗಡ ಹಾಗೂ ದೆಹಲಿಯ ರಾಜಪಥ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next