Advertisement

Yellapur; ಪಣಸಗುಳಿ ಸೇತುವೆ ಮುಳುಗಡೆ: ಸಂಚಾರ ಸ್ಥಗಿತ

10:28 AM Jul 03, 2024 | Team Udayavani |

ಯಲ್ಲಾಪುರ: ಬೇಡ್ತಿ ನದಿಯ ಇಕ್ಕೆಲಗಳಲ್ಲಿ ಮಳೆ ಸ್ವಲ್ಪ ಜೋರಾಗಿದ್ದು ಬೇಡ್ತಿ ನದಿ ಹರಿವು ಜೋರಾಗುತ್ತಿದೆ.ಬೇಡ್ತಿ ನದಿ ಈಚೆ ಗುಳ್ಳಾಪುರ ಅರಬೈಲ್ ಮತ್ತು ಆಚೆ ಭಾಗ ಶೇವ್ಕಾರ್ ಕೈಗಡಿ ಕುಂಕಿ ಹೆಗ್ಗಾರ್ ಇನ್ನಿತರ ಪ್ರದೇಶಗಳ ಸಂಪರ್ಕ ಮಾರ್ಗವಾದ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿಯ ಪಣಸಗುಳಿ ಸೇತುವೆ ಬುಧವಾರ ಬೆಳಗಿನ ಜಾವದಿಂದ ಜಲಾವೃತವಾಗಿದೆ

Advertisement

ಹೊಳೆಯ ನೀರು ಸೇತುವೆಯ ಮೇಲಿಂದ ಉಕ್ಕುತ್ತಿದ್ದು ತಾತ್ಕಾಲಿಕವಾದ ಸಂಚಾರ ಸ್ಥಗಿತಗೊಂಡಿದೆ.ಇವತ್ತು ಬೆಳಗ್ಗೆ ಆಚೆ ಕಡೆ ಯಿಂದ ಹೆದ್ದಾರಿಗೆ ಬರಬೇಕಾದವರು,ವಿದ್ಯಾರ್ಥಿಗಳು ಈ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ವಾಪಸ್ಸಾಗಿದ್ದಾರೆನ್ನಲಾಗಿದೆ.ನೀರು ಏರುತ್ತಲೇ ಇದ್ದು ಗಟ್ಟದ ಮೇಲಿನ‌ಪ್ರದೇಶದಲ್ಲಿ ಬೆಳಗಿನಿಂದ ಮಳೆಯೂ‌ ಜೋರಾಗಿದೆ.ಅಪಾಯದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ಸೇತುವೆಯ ಮೇಲೆ ಸಂಚರಿಸಬಾರದೆಂದು ತಹಶೀಲ್ದಾರ್ ಕಟ್ಡಪ್ಪಣೆಯನ್ನೂ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next