Advertisement

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

12:50 AM Jul 03, 2024 | Team Udayavani |

ಮಂಗಳೂರು: ತಾಲೂಕಿನ ದಾಮಸ್‌ಕಟ್ಟೆ, ಬಳ್ಕುಂಜೆ ಜಿಲ್ಲಾ ಮುಖ್ಯ ರಸ್ತೆಯ 9.50 ಕಿ.ಮೀ. ರಲ್ಲಿನ ಪಲಿಮಾರ್‌ ಗ್ರಾಮದ ಸಮುದ್ರದ ಹಿನ್ನೀರಿನ ಪ್ರದೇಶದ ಸೇತುವೆ ದುಃಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲದಿರುವುದರಿಂದ ಮುಂದಿನ ಆದೇಶದವರೆಗೆ ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಆದೇಶಿಸಿದ್ದಾರೆ.

Advertisement

ಬದಲಿ ಮಾರ್ಗ: ಪಲಿಮಾರ್‌ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಪಲಿಮಾರ್‌ ಚರ್ಚ್‌ ರಸ್ತೆಯ ಮೂಲಕ ಸಂಚರಿಸಿ ಇನ್ನಾ, ಮುಂಡ್ಕೂರು ರಸ್ತೆಯ ಮೂಲಕ ಮುಂಡ್ಕೂರಿನಲ್ಲಿ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಪರ್ಕಿಸಿ, ಮಂಗಳೂರಿಗೆ ಸಂಚರಿಸಬೇಕು.

ಪಲಿಮಾರ್‌ ಕಡೆಯಿಂದ ಬಳ್ಕುಂಜೆ ಗೆ ಸಂಚರಿಸುವ ವಾಹನಗಳು, ಪಲಿಮಾರ್‌ ಚರ್ಚ್‌ ರಸ್ತೆಯ ಮೂಲಕ ಸಂಚರಿಸಿ, ಇನ್ನಾ, ಮುಂಡ್ಕೂರು ರಸ್ತೆಯ ಮೂಲಕ ಮುಂಡ್ಕೂರು ಎಂಬಲ್ಲಿ ಮಂಗಳೂರು- ಅತ್ರಾಡಿ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಿ, ಆ ಹೆದ್ದಾರಿಯಲ್ಲಿ ಪಟ್ಟೆ ಕ್ರಾಸ್‌ ಎಂಬಲ್ಲಿ ಬಲಕ್ಕೆ ತಿರುಗಿ, ಏಳಿಂಜೆ- ಉಳಿಪಾಡಿ- ಬಳ್ಕುಂಜೆ – ಪಟ್ಟಾ ಕ್ರಾಸ್‌ ಕುದ್ರಿಪದವು ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಬಳ್ಕುಂಜೆಗೆ ಸಂಚರಿಸುವಂತೆ ಅವರು ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next