Advertisement

Yellapur; ಬೈಕ್ ಓವರ್ ಟೇಕ್ ವಿಚಾರ: ಕೊಲೆಯಲ್ಲಿ ಅಂತ್ಯವಾದ ಯುವಕರ ಜಗಳ

03:13 PM Feb 25, 2024 | Team Udayavani |

ಯಲ್ಲಾಪುರ: ಬೈಕ್ ಓವರ್ ಟೇಕ್ ವಿಚಾರಕ್ಕೆ ಸಂಬಂದಿಸಿದ ಜಗಳ ಅತಿರೇಕಕ್ಕೆ ಹೋಗಿ ಓರ್ವ ಯುವಕನ ಕೊಲೆಯಲ್ಲಿ ಅಂತ್ಯ ಕಂಡ ದುರ್ಘಟನೆ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ನಡೆದಿದೆ.

Advertisement

ಮೃತ ಯುವಕನನ್ನು ಹಳಿಯಾಳದ ಕಾಮತಿಕೊಪ್ಪದ ಗುಂಡೊಳ್ಳಿಯ ಪ್ರಜ್ವಲ್ ಪ್ರಕಾಶ ಕಕ್ಕೇರಿಕರ್ (24) ಎಂದು ಗುರುತಿಸಲಾಗಿದೆ.

ಹುಣಶೆಟ್ಟಿಕೊಪ್ಪದಲ್ಲಿ ನಡೆಯುತ್ತಿರುವ ಜಾತ್ರೆಯಿಂದ ಮನೆಗೆ ವಾಪಸ್ಸಾಗುವಾಗ ಓವರ್ ಟೇಕ್ ಮಾಡಿ ಮುಂದೆ ಬಂದ ಈತನ ಮೇಲೆ ಸಾಣಾ ಮರಾಠಿ, ಅನಿಕೇತ ಮಿರಾಶಿ, ರಿತೇಶ ಪಾಟೀಲ್, ಪಾಂಡುರಂಗ ಕಳಸೂರಕರ್, ಪ್ರಶಾಂತ ಕಳಸೂರಕರ್, ರೂಪೇಶ, ಸತೀಶ ಇವರ ಗುಂಪು ಅಡ್ಡಗಟ್ಟಿ ಜಗಳ ಶುರುಮಾಡಿ ನಂತರ ಕೊಲೆ ಮಾಡಿದ್ದಾರೆ.

ಈ ಬಗ್ಗೆ ಮೃತನ ಅಣ್ಣ ಉಜ್ವಲ್ ಪ್ರಕಾಶ ಕಕ್ಕೇರಿಕರ್ ಪೋಲಿಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಭಟನೆ: ಕೊಲೆಯಾಗಲ್ಪಟ್ಟ ವ್ಯಕ್ತಿ ಸಿದ್ದಿ ಸಮುದಾಯಕ್ಕೆ ಸೇರಿದವನಾಗಿದ್ದು ಈ ಬಗ್ಗೆ ಸಿದ್ದಿ ಸಂಘಟನೆಯ ಪ್ರಮುಖರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಿಪಡಿಸಿದ್ದರಲ್ಲದೇ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕೊಲೆಗಡುಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಹಳಿಯಾಳದ ಸಿದ್ದಿ ಮಹಿಳಾ ಸಂಘದವರು ಇಲ್ಲಿಯ ಠಾಣೆಗೆ ಆಗಮಿಸಿ ಕೊಲೆಗಡುಕರನ್ನು ಅಡಗಿಸಿಡದೆ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕೊಲೆ ಪ್ರಕರಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಕೊಲೆಗೆಡುಕರ ರಕ್ಷಣೆಯಾಗುತ್ತಿದೆ ಎಂಬ ಆರೋಪ ಗಟ್ಟಿಯಾಗಿ ಕೇಳಿಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next