Advertisement

ಯಡಿಯೂರಪ್ಪ ಬಂಜಾರಾ ಸಮುದಾಯಕ್ಕೆ ಎರಡನೇ ಸೇವಾಲಾಲ್ ಇದ್ದಂತೆ : ಸಚಿವ ಪ್ರಭು ಚವ್ಹಾಣ್

04:47 PM Mar 17, 2021 | Team Udayavani |

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಂಜಾರಾ ಸಮುದಾಯಕ್ಕೆ ಎರಡನೇ ಸೇವಾಲಾಲ್ ಇದ್ದಂತೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು. ವಸಂತನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಂಜಾರ ಭವನಕ್ಕೆ ಭೇಟಿ ನೀಡಿದ ಸಚಿವರು ಬಂಜಾರಾ ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅಭಯ ಸದಾ ಇದ್ದೇ ಇದೆ ಎಂದು ಹೇಳಿದರು.

Advertisement

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂ.4.5 ಕೋಟಿ ನೀಡಿ ಬೆಂಗಳೂರಿನಲ್ಲಿ ಸಮುದಾಯ ಒಂದು ಸ್ಥಳದಲ್ಲಿ ಒಗ್ಗೂಡುವಂತೆ ಮಾಡಿದ್ದರು. 2009ರಲ್ಲಿ ಶಂಕುಸ್ಥಾಪನೆ ಆದರೂ ಮುಂದೆ ಬಂದ ಕಾಂಗ್ರೆಸ್ ಸರ್ಕಾರ ಸಮುದಾಯ ಭವನಕ್ಕೆ ಯಾವುದೇ ರೀತಿಯ ಸಹಾಯ ನೀಡಲಿಲ್ಲ. ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ರೂ.1.5 ಕೋಟಿ ನೀಡಿ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳಲು ಮುಖ್ಯಮಂತ್ರಿಯವರು ಸಹಾಯ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಂಜಾರ ಸಮುದಾಯದ ಸಂಘಟನೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬಂಜಾರಾ ಭವನ ಸಹಕಾರಿಯಾಗಲಿದೆ. ಒಟ್ಟಾರೆ ರೂ 6.5 ಕೋಟಿ ವೆಚ್ಚದಲ್ಲಿ ಸುಂದರವಾದ ಬಂಜಾರಾ ಭವನ ನಿರ್ಮಾಣವಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಬಂಜಾರಾ ಭವನವನ ಉದ್ಘಾಟನೆ ಆಗಲಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು. ಭೇಟಿಯ ವೇಳೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next