Advertisement

ಆಪರೇಷನ್‌ ಕಮಲ ಎನ್ನುವ ಶಬ್ದ ಹುಟ್ಟು ಹಾಕಿದವರೇ ಯಡಿಯೂರಪ್ಪ: ಸಿದ್ದು

12:40 AM Jan 18, 2019 | |

ಹುಬ್ಬಳ್ಳಿ: ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಯಾವುದೇ ಭರವಸೆ ನೀಡಿಲ್ಲ.ಇದಕ್ಕಾಗಿ ಯಾವುದೇ ಸಚಿವರು ರಾಜೀನಾಮೆ ನೀಡುತ್ತಿಲ್ಲ. ಯಾರಿಗೂ ಸಚಿವ ಸ್ಥಾನ ನೀಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Advertisement

ಗುರುವಾರ ಸುದ್ದಿ ಗಾರರೊಂದಿಗೆ ಮಾತ ನಾಡಿದ ಅವರು, ಬಿಜೆಪಿ ನಡೆಸಲು ಮುಂದಾಗಿದ್ದ ಆಪರೇಶನ್‌ ಕಮಲ ಯಶಸ್ವಿಯಾಗುವುದಿಲ್ಲ ಎಂದು ಗೊತ್ತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದಟಛಿವಾಗಿ ಬಿಜೆಪಿ ನಾಯಕರು ನಡೆದುಕೊಳ್ಳುತ್ತಿದ್ದಾರೆ.

ಆಪರೇಷನ್‌ ಕಮಲ ಎನ್ನುವ ಶಬ್ದ ಹುಟ್ಟು ಹಾಕಿದವರೇ ಯಡಿ ಯೂರಪ್ಪ. ಅಧಿಕಾರಕ್ಕಾಗಿ ಮಾಡುತ್ತಿರುವ ಇಂತಹ ರಾಜಕಾರಣ ನಿಜಕ್ಕೂ ಹೇಸಿಗೆ ಹಾಗೂ ಅಸಹ್ಯ ಮೂಡಿಸುತ್ತಿದೆ. ತಮ್ಮ ಶಾಸಕರ ಮೇಲೆ ಭರವಸೆ ಇಡದ ಬಿಜೆಪಿ ನಾಯಕರು ಹರಿಯಾಣದ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದಾರೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next