Advertisement

ಯಡಮೊಗೆ : ಹೊಸ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣ

12:03 AM Jun 08, 2020 | Sriram |

ಕುಂದಾಪುರ: ಸಂಪೂರ್ಣ ಶಿಥಿಲಗೊಂಡಿದ್ದ ಯಡಮೊಗೆ ಯಿಂದ ಹೊಸಂಗಡಿ, ಸಿದ್ದಾಪುರ,ಕುಂದಾಪುರದ ಕಡೆಗೆ ಸಂಪರ್ಕ ಕಲ್ಪಿಸುವ ಹೊಸಬಾಳು ಸೇತುವೆಗೆ ಪರ್ಯಾಯವಾಗಿ ಹೊಸದಾದಸೇತುವೆ ನಿರ್ಮಾಣಗೊಂಡಿದೆ. ಈಗಾಗಲೇ ಕಾಮಗಾರಿ ಪೂರ್ಣ ಗೊಂಡಿದ್ದು, ವಾಹನ ಸಂಚಾರ ಕಲ್ಪಿಸುವ ಕೊನೆಯ ಹಂತದ ಕೆಲಸವಷ್ಟೇ ಬಾಕಿಯಿದೆ.

Advertisement

ಯಡಮೊಗೆ – ಹೊಸಂಗಡಿಗೆ ಸಂಪರ್ಕ ಕಲ್ಪಿಸುವ ಹೊಸದಾದ ಹೊಸಬಾಳು ಸೇತುವೆ ಕಾಮಗಾರಿಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 2.5 ಕೋ.ರೂ. ಮಂಜೂರಾಗಿತ್ತು. ಈ ವರ್ಷದ ಜನವರಿಯಲ್ಲಿ ಆರಂಭಗೊಂಡ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗಿದ್ದು, ಈಗ ಕೊನೆಯ ಹಂತದಲ್ಲಿದೆ.

ಬಹು ವರ್ಷಗಳ‌ ಬೇಡಿಕೆ
ಹೊಸಬಾಳು ಬಳಿ ಕುಬಾj ನದಿಗೆ 40 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆ ಶಿಥಿಲಗೊಂಡು 3 ವರ್ಷಗಳಾಗಿದ್ದವು.ಇದಲ್ಲದೆ ಅಪಾಯಕಾರಿಯೆಂದು ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, 2018ರಲ್ಲಿ ಪರ್ಯಾಯ ವಾಗಿ ತಾತ್ಕಾಲಿಕವಾಗಿ ಮೋರಿ ನಿರ್ಮಿಸ
ಲಾಗಿತ್ತು. ಅದು ಕೂಡ ಕಳೆದ ಮಳೆಗಾಲ ದಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತ ಗೊಂಡಿತ್ತು. ಯಡಮೊಗೆಯಿಂದ ಹೊಸಂಗಡಿಗೆ ಸಂಪರ್ಕಿಸುವ ಈ ಸೇತುವೆಯನ್ನು ಮರು ನಿರ್ಮಾಣ ಮಾಡಬೇಕು ಎನ್ನುವ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಯಾಗಿತ್ತು. ಅದೀಗ ಈ ಮಳೆಗಾಲದ ಸಮಯಕ್ಕೆ ಈಡೇರಿದಂತಾಗಿದೆ.

ಸುದಿನ ವರದಿ
ಯಡಮೊಗೆ – ಹೊಸಂಗಡಿ ಸಂಪರ್ಕಿಸುವ ಹೊಸಬಾಳು ಸೇತುವೆ ಶಿಥಿಲಗೊಂಡ ಬಗ್ಗೆ “ಉದಯವಾಣಿ’ಯು 2018ರ ಜೂ.10ರಂದು ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು.

ಕೊಟ್ಟ ಮಾತು ಉಳಿಸಿದ್ದೇನೆ
ಜನವರಿಯಲ್ಲಿ 2.5 ಕೋ.ರೂ. ವೆಚ್ಚದ ಸೇತುವೆಗೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ಈಗ ಮಳೆಗಾಲಕ್ಕೂ ಮೊದಲೇ ಪೂರ್ಣಗೊಂಡಿದೆ. ಇನ್ನು ಕೆಲ ದಿನಗಳಲ್ಲಿ ಸಂಚಾರಕ್ಕೆ ಅನುವು ಮಾಡಲಾಗುವುದು. ಯಡಮೊಗೆ ಸೇತುವೆಯಿಂದ ಕಮಲಶಿಲೆ ರಸ್ತೆ ಸಂಪರ್ಕದ ಸುಮಾರು
5 ಕಿ.ಮೀ. ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿ 5 ಕೋ.ರೂ. ವೆಚ್ಚದ ಕಾಮಗಾರಿ ಕೂಡ ಆರಂಭವಾಗಿದೆ. ಚುನಾವಣೆ ವೇಳೆ ಕೊಟ್ಟ ಮಾತನ್ನು ಈಗ ಈಡೇರಿಸಿದ್ದೇನೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ,, ಬೈಂದೂರು ಶಾಸಕರು

Advertisement

ಶೀಘ್ರ ಸಂಚಾರಕ್ಕೆ ಅನುವು
ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉದ್ಘಾಟಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸೇತುವೆಯ ಎರಡೂ ಬದಿ ಸ್ವಲ್ಪ ಸಮತಟ್ಟು ಮಾಡಲು ಬಾಕಿ ಇದೆ. ರಸ್ತೆಯ ಕಾಮಗಾರಿ ನಡೆಯುತ್ತಿದೆ.
ದುರ್ಗಾದಾಸ್‌, ಕಾರ್ಯನಿರ್ವಾಹಕ ಎಂಜಿನಿಯರ್‌,
ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next