Advertisement

TN: ಯಾರಪ್ಪನ ಆಸ್ತೀನೂ ಕೇಳ್ತಿಲ್ಲ- ಉದಯನಿಧಿ ನಾಲಗೆ ಹಿಡಿತದಲ್ಲಿರಲಿ: ಸಚಿವೆ ನಿರ್ಮಲಾ

12:50 AM Dec 24, 2023 | Team Udayavani |

ಹೊಸದಿಲ್ಲಿ: ತಮಿಳುನಾಡು ಪ್ರವಾಹ ಪರಿಹಾರ ವಿಚಾರ ಕ್ಕೆ ಸಂಬಂಧಿಸಿದಂತೆ ಸಚಿವ ಉದಯನಿಧಿ ಸ್ಟಾಲಿನ್‌ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನಡುವಿನ ವಾಗ್ವಾದ ತಾರಕಕ್ಕೇರಿದೆ. “ಯಾರಪ್ಪನ ಆಸ್ತಿಯನ್ನೂ ಕೇಳುತ್ತಿಲ್ಲ” ಎಂದು ಉದಯನಿಧಿ ಹೇಳಿದರೆ, ಇತ್ತ “ನಿಮ್ಮಪ್ಪನ್ನ ಆಸ್ತಿಯಲ್ಲಿ ಅಧಿಕಾರಕ್ಕೆ ಬಂದಿರುವಿರೇ” ಎಂದು  ಸಚಿವೆ ನಿರ್ಮಲಾ ಪ್ರಶ್ನಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ರಾಜ್ಯಕ್ಕೆ ಕೇಂದ್ರ ಸರಕಾರ ಪ್ರವಾಹ ಪರಿಹಾರದ ರೂಪದಲ್ಲಿ ಹಣ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿ ಉದಯನಿಧಿ ಆಕ್ರೋಶ ವ್ಯಕ್ತಪಡಿಸಿದ್ದರು. “ನಾನು ನಮ್ಮ ರಾಜ್ಯದ ಜನರು ತೆರಿಗೆ ಕಟ್ಟಿರುವ ಹಣವನ್ನು ಕೇಳುತ್ತಿದ್ದೇನೆಯೇ ವಿನಾ ಯಾರಪ್ಪನ ಆಸ್ತಿಯನ್ನೂ ಕೇಳುತ್ತಿಲ್ಲ” ಎಂದಿದ್ದರು.

ಈ ಬಗ್ಗೆ ಸಚಿವೆ ನಿರ್ಮಲಾ ಪ್ರತಿಕ್ರಿಯಿಸಿ, ಸಾರ್ವಜನಿಕ ಪ್ರತಿನಿಧಿಯಾದವರಿಗೆ ನಾಲಗೆ ಹಿಡಿತದಲ್ಲಿರಬೇಕು. ನಾವೂ ಅವರನ್ನು ನಿಮ್ಮಪ್ಪನ ಆಸ್ತಿಯಲ್ಲಿ ಅಧಿಕಾರಕ್ಕೆ ಬಂದಿರುವಿರೇ ಎಂದು ಪ್ರಶ್ನಿಸಬಹುದಲ್ಲವೇ? ಆದರೆ ಜನಪ್ರತಿನಿಧಿಗಳಿಗೆ, ನಮ್ಮ ಸ್ಥಾನಕ್ಕೆ ಅಂಥ ಮಾತುಗಳು ಸೂಕ್ತವಲ್ಲ. ರಾಜಕೀಯಕ್ಕೆ ಯಾರ ಅಪ್ಪನನ್ನೂ, ಅಮ್ಮ ನನ್ನು ಎಳೆದು ತರುವ ಅಗತ್ಯವಿಲ್ಲ. ತ.ನಾಡಿಗೆ ಕೇಂದ್ರ 900 ಕೋಟಿ ರೂ. ಬಿಡುಗಡೆ ಮಾಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next