Advertisement

ಯೇನೆಕಲ್ಲು: ಕಾಡಾನೆ ಹಾವಳಿ; ಹಾನಿ

12:58 AM Sep 16, 2019 | Team Udayavani |

ಸುಬ್ರಹ್ಮಣ್ಯ: ಯೇನೆಕಲ್ಲು ಗ್ರಾಮದ ದೇವರಹಳ್ಳಿ-ಮಾಣಿಬೈಲು ಪರಿಸರದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ತೋಟಗಳಿಗೆ ದಾಳಿ ನಡೆಸಿ ಫಸಲು ಹಾಗೂ ಕೃಷಿ ಉಪಕರಣಗಳನ್ನು ಹಾಳುಗೆಡವುತ್ತಿದೆ.

Advertisement

ರಾಮಣ್ಣ ಗೌಡ ಅವರ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆ 2 ತೆಂಗಿನ ಸಸಿಗಳನ್ನು ತಿಂದು ನಾಶಪಡಿಸಿದೆ. 50ಕ್ಕೂ ಅಧಿಕ ಬಾಳೆಗಿಡಗಳನ್ನು, ಅಡಿಕೆ ಸಸಿಗಳನ್ನು ಹಾಳುಗೆಡವಿದೆ. ತೋಟದ ಸುತ್ತ ಅಳವಡಿಸಿರುವ ಸೋಲಾರ್‌ ತಡೆ ಬೇಲಿಗೂ ಹಾನಿಯನ್ನುಂಟು ಮಾಡಿದೆ. ಸ್ಥಳೀಯರು ಸೇರಿ ಆನೆಯನ್ನು ಕಾಡಿಗೆ ಅಟ್ಟಿದರು.

ಈ ಭಾಗದಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿರುವ ಕುರಿತು ಸ್ಥಳೀಯರಾದ ಪ್ರಕಾಶ್‌ ದೇವರಹಳ್ಳಿ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next