Advertisement

Yallapur: ಸಿದ್ದಿ ಯುವಕನ ಹತ್ಯೆಯ ಪ್ರಮುಖ ಆರೋಪಿ ಬಂಧನ

09:52 PM Feb 28, 2024 | Team Udayavani |

ಯಲ್ಲಾಪುರ: ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಸಿದ್ದಿ ಯುವಕ ಪ್ರಜ್ವಲ ಕಕ್ಕೇರಿಕರ್ ನ ಕೊಲೆಯ ಎರಡನೇಯ ಪ್ರಮುಖ ಆರೋಪಿ ಅನಿಕೇತ ವಿಜಯ ಮಿರಾಶಿ ಕಿರವತ್ತಿ ಯನ್ನು ಪೋಲಿಸರು ಬುಧವಾರ ಬೆಳಗ್ಗೆ ಬಂಧಿಸಿರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Advertisement

ಬಂಧನಕ್ಕಾಗಿ ಪೋಲಿಸರನ್ನು ಮೂರು ತಂಡಗಳನ್ನಾಗಿ ರಚಿಸಿ ವಿವಿಧೆಡೆಗಳಲ್ಲಿ ಕಾರ್ಯಾಚರಣೆಗಿಳಿದಿದ್ದರು. ಈ ಪೈಕಿ ಇಲ್ಲಿಯ ಪಿಎಸ್ಐ ಸಿದ್ದಪ್ಪ ಗುಡಿ ನೇತೃತ್ವದ ತಂಡ ಬುಧವಾರ ಬಲೆ ಬೀಸಿ ಧಾರವಾಡ ತಾಲೂಕಿನ ಕಲಘಟಗಿ ಬಳಿ ಬಂಧಿಸಿದ್ದಾರೆ.ಈ ಕೊಲೆಯಲ್ಲಿ‌ ಪ್ರಮುಖ ಆರೋಪಿಯಾದ ಅನಿಕೇತ ವಿಜಯ ಮಿರಾಶಿಯ ಬಂಧನಕ್ಕೆ ಆಗ್ರಹಿಸಿ ಭಾನುವಾರ ಮತ್ತು ಸೋಮವಾರ ಯಲ್ಲಾಪುರದಲ್ಲಿ ಸಿದ್ದಿ, ವಿವಿಧ ದಲಿತ ಸಂಘಟನೆಗಳ ಪ್ರತಿಭಟನೆ ಭುಗಿಲೆದ್ದಿತ್ತು.

ಸೋಮವಾರ ನಡೆದ ಸಂಧಾನದ ಬಳಿಕ ಶವವನ್ನು ಕುಟುಂಬದವರು ಪಡೆದು ಸಂಸ್ಕಾರ ಮಾಡಿದ್ದರು.ಈ ಮೊದಲು ಆರೋಪಿ ಬಂಧನದವರೆಗೂ ಶವ ಒಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಶವ ಸಂಸ್ಕಾರದ ಹಿನ್ನೆಲೆಯಲ್ಲಿ‌ ಮಂಗಳವಾರ ಪ್ರತಿಭಟನೆ ಯಿಂದ ಹಿಂದೆ ಸರಿದಿದ್ದರು. ಬುಧವಾರ ಮತ್ತೆ ಪ್ರತಿಭಟನೆಯತ್ತ ಹೊರಟಿದ್ದರು.ಆದರೆ ಪ್ರಮುಖ ಆರೋಪಿಯನ್ನು ಬಂಧಿಸಲಾಗುತ್ತಿದೆ ಎಂಬ ಮಾಹಿತಿ ಬರುತ್ತಿದ್ದಂತೆ ಪ್ರತಿಭಟನೆ ಕೈ ಬಿಟ್ಟು ಚದುರಿದ್ದರು.ಆರೋಪಿ ಬಂಧಿಸಿದ ಬಗ್ಗೆ ಪೋಲಿಸರನ್ನು ಅಭಿನಂದಿಸುತ್ತೇವೆ ಆದರೆ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದಲಿತ ಸಂಘರ್ಷ ಸಮಿತಿಯವರು ಮನವಿ ಮಾಡಿದ್ದಾರೆ.

ಸಾರ್ವಜನಿಕರ ಪ್ರಶಂಸೆ
ಅನಿಕೇತ ಮಿರಾಶಿ ಬಂಧನದ ಸುದ್ದಿ ತಿಳಿಯುತ್ತಲೇ ಸಾರ್ವಜನಿಕರು, ಸಿದ್ದಿ ಸಂಘದವರು ಪೋಲಿಸರ ಕಾರ್ಯವನ್ನು ಶ್ಲಾಘಿಸಿದರು.ಅನಿಕೇತ ಮಿರಾಶಿ ಈತ ಪ್ರಮುಖ ರಾಜಕಾರಣಿ,ಬೇರೆ ಬೇರೆಯವರ ಕೃಪಾಕಟಾಕ್ಷ,ಉದ್ಯಮಿಯಾಗಿದ್ದ ಜತೆಗೆ ಜಿ.ಪಂ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಮಾಜಿ ಸದಸ್ಯರಾಗಿದ್ದ ವಿಜಯ ಮಿರಾಶಿಯವರ ಮಗನಾದ್ದರಿಂದ ಬಂಧನವಾಗದಿರಬಹುದೆಂಬ ಸಂಶಯ ಸಾರ್ವಜನಿಕವಲಯದಲ್ಲಿತ್ತು.ಆದರೆ ಪೋಲಿಸರು ಒತ್ತಡದ ಮಧ್ಯೆಯೂ ಅಗತ್ಯ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಬುಧವಾರ ಮದ್ಯಾಹ್ನ ಹಾಜರು ಪಡಿಸುವ ಮೂಲಕ ಕರ್ತವ್ಯಪ್ರಜ್ಞೆ ತೋರಿದ್ದಾರೆಂಬ ಪ್ರಶಂಸೆಗೊಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next