Advertisement

ಯಲ್ಲಾಪುರ: ಅಪರಿಚಿತ ವಾಹನ ಢಿಕ್ಕಿಯಾಗಿ ಬೈಕ್ ಸವಾರ ಸಾವು; ನೇತ್ರದಾನ

09:51 PM Aug 27, 2022 | Team Udayavani |

ಯಲ್ಲಾಪುರ : ಬೈಕ್ ಸವಾರನಿಗೆ ಅಪರಿಚಿತ ವಾಹನವೊಂದು ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾ.ಹೆದ್ದಾರಿ 63 ರ ಶೀರ್ಲೆ ಕ್ರಾಸ್ ಬಳಿ ಶನಿವಾರ ನಡೆದಿದೆ.

Advertisement

ಅರಬೈಲ್ ಕಡೆಯಿಂದ ಬರುತ್ತಿದ್ದ ಬೈಕ್ ಗೆ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಹೋಗುವ ವಾಹನ ಡಿಕ್ಕಿಪಡಿಸಿದೆ. ಬೈಕ್ ನಲ್ಲಿ ಬರುತ್ತಿದ್ದ ಗುರುಪ್ರಸಾದ ರಾಮಚಂದ್ರ ಗಾಂವ್ಕಾರ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಢಿಕ್ಕಿಯಾದ ವಾಹನ ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪರಾರಿಯಾದ ವಾಹನವನ್ನು ಪೋಲಿಸರು ಪತ್ತೆ ಹಚ್ಚಿದ್ದಾರೆ.

 ನೇತ್ರ ದಾನ

ಅಪಘಾತದಲ್ಲಿ ಭಾರೀ ಪೆಟ್ಟಿನಿಂದ ತಲೆಗೆ ಕಣ್ಣಿಗೆ ಪೆಟ್ಟು ಬಿದ್ದಿತ್ತು. ಅವರ ತಾಯಿಯ ಕೋರಿಕೆಯಂತೆ ನೇತ್ರದಾನ ಮಾಡುವದಕ್ಕೆ ಮುಂದಾದರೂ ಒಂದು ಕಣ್ಣಿಗೆ ಬಲವಾದ ಪೆಟ್ಟುಬಿದ್ದ ಕಾರಣ ಕೊನೆಯಲ್ಲಿ ಒಂದು ಕಣ್ಣು ಮಾತ್ರ ಸುಸ್ಥಿತಿಯಲ್ಲಿತ್ತು ಆ ಕಣ್ಣನ್ನು ದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next