Advertisement

Yelandur: ಚಿರತೆ ದಾಳಿ ಬಾಲಕನಿಗೆ ತೀವ್ರ ಗಾಯ

11:06 PM Jul 25, 2023 | Team Udayavani |

ಯಳಂದೂರು: ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಬಾಲಕನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ಜರುಗಿದೆ.

Advertisement

ಗಾಯಗೊಂಡ ಬಾಲಕನನ್ನು ಇದೇ ಗ್ರಾಮದ ಹರ್ಷ(8) ಎಂದು ಗುರುತಿಸಲಾಗಿದೆ. ಈತ ತನ್ನ ನೆರೆ ಮನೆಗೆ ತೆರಳಿ ತನ್ನ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಚಿರತೆ ಏಕಾಏಕಿ ಈತನ ಮೇಲೆ ದಾಳಿ ಮಾಡಿದೆ.

ಆಗ ಬಾಲಕ ಕಿರಿಚಿಕೊಂಡಿದ್ದಾನೆ ಕೂಡಲೇ ಈತನ ಪೋಷಕರು ಹಾಗೂ ನೆರೆಹರೆಯವರು ಈಚೆ ಬಂದು ಗದ್ದಲ ಮಾಡಿದ್ದರಿಂದ ಚಿರತೆ ಈತನನ್ನು ಬಿಟ್ಟು ಪರಾರಿಯಾಗಿದೆ.

ಕಳೆದ ಮೂರು ದಿನಗಳಿಂದಲೂ ತಾಲೂಕಿನ ಕೆಸ್ತೂರು, ಮಲ್ಲಿಗಹಳ್ಳಿ, ಕಟ್ನವಾಡಿ ಹೊನ್ನೂರು ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ. ಚಿರತೆ ಇದೆ ಎಂಬ ಮಾಹಿತಿ ಇದ್ದು ಅರಣ್ಯ ಇಲಾಖೆ ಈಗಾಗಲೇ ಅನೇಕ ಕಡೆ ಬೋನನ್ನು ಇಟ್ಟಿದ್ದರು ಕೂಡ ಚಿರತೆ ಬೋನಿಗೆ ಬಿದ್ದಿಲ್ಲ, ಹಾಗಾಗಿ ಈ ಗ್ರಾಮಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next