Advertisement

ಯಳಜಿತ್‌: ದನ ಕಳ್ಳತನ ಸ್ಥಳಕ್ಕೆ ಕೆ. ಗೋಪಾಲ ಪೂಜಾರಿ ಭೇಟಿ

09:59 PM Jun 21, 2019 | Sriram |

ಬೈಂದೂರು: ಬೈಂದೂರಿನ ಯಳಜಿತ್‌ದಲ್ಲಿ ದನ ಕಳ್ಳತನವಾದ ದಾರು ಗೌಡ್ತಿ ಮತ್ತು ಲಕ್ಷ್ಮೀ ಪೂಜಾರಿಯವರ ಮನೆಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿದರು.

Advertisement

ಅಪರಾಧಿಗಳನ್ನು ತತ್‌ಕ್ಷಣ ಬಂಧಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ತಾನು ಮಾತನಾಡಿದ್ದು ಈ ರೀತಿಯ ಘಟನೆ ಮರುಕಳಿಸದಂತೆ ಪೊಲೀಸರು ಸಮರ್ಪಕ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ಎಸ್‌.ರಾಜು ಪೂಜಾರಿ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌. ಮದನ್‌ ಕುಮಾರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಶೇಖರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next