Advertisement

ಯಕ್ಷಗುರು ಆನಂದ ಭಟ್‌ರಿಗೆ ಸಮ್ಮಾನ

05:46 PM Mar 02, 2019 | |

ಮುಂಬಯಿ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಇದರ 14ನೇ ವಾರ್ಷಿಕೋತ್ಸವ ಸಮಾರಂಭ ಪೆರ್ಲದಲ್ಲಿ ನಡೆಯಿತು.  ಈ ಸಂದರ್ಭ ಪುಣೆಯ ಯಕ್ಷಗಾನ ಕಲಾವಿದ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ನಿವೃತ್ತ ಶಿಕ್ಷಕ ಪದ್ಮನಾಭ ರಾವ್‌  ಉದ್ಘಾಟಿಸಿದರು. ಕಲಾವಿದ ಎಸ್‌. ಬಿ. ನರೇಂದ್ರಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.  ಶ್ರೀ ರಾಘವೇಂದ್ರ ಭಟ್‌ ಉಡುಪಮೂಲೆ ಆಶೀರ್ವಚನ ನೀಡಿದರು. ಉಪನ್ಯಾಸಕ ವಿದ್ವಾನ್‌ ಎಸ್‌. ಬಿ. ಖಂಡಿಗೆ ಅವರನ್ನೂ ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್‌. ವಿ. ಭಟ್‌, ಪ್ರಗತಿಪರ ಕೃಷಿಕ  ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ ಅಭಿನಂದನಾ ಭಾಷಣ ಮಾಡಿದರು. 

ಕೇಂದ್ರದ ನಿರ್ದೇಶಕ ನಾಟ್ಯಗುರು ಸಬ್ಬಣಕೋಡಿ ರಾಮಭಟ್‌ ವಂದಿಸಿದರು. ಯಕ್ಷಗಾನ ನಾಟ್ಯಕೇಂದ್ರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next