Advertisement

ಯಕ್ಷಗಾನ ಕಲಾವಿದ, ಮಂದಾರ್ತಿ ಮೇಳದ ಜನಪ್ರಿಯ ಸ್ತ್ರೀ ವೇಷಧಾರಿ ಕೆರೆಗೆ ಬಿದ್ದು ಸಾವು

09:25 AM Nov 18, 2020 | Mithun PG |

ಸಿದ್ದಾಪುರ: ಯಕ್ಷಗಾನ ಕಲಾವಿದ, ಅಮಾಸೆಬೈಲು ಗ್ರಾಮದ ಕೆಲ ಸುಗ್ಗಿಗದ್ದೆ ಸುದೀಪ ಶೆಟ್ಟಿ (24) ಅವರು ಮನೆಯ ಪಕ್ಕದ ಕೆರೆಗೆ ಆಕಸ್ಮಿಕವಾಗಿ  ಬಿದ್ದು ಮೃತಪಟ್ಟ ಘಟನೆ ನ. 16ರಂದು ನಡೆದಿದೆ.

Advertisement

2 ವರ್ಷದ ಹಿಂದೆ ರಸ್ತೆ ಅಪಘಾತಕ್ಕೊಳಗಾಗಿದ್ದ ಅವರು ಆಗಾಗ್ಗೆ ತಲೆಸುತ್ತು ಬಂದು ಬೀಳುತ್ತಿದ್ದರು. ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ಇದ್ದುದರಿಂದ ಹುಡುಕಾಡಿದಾಗ ಮನೆಯ ಸಮೀಪದ ನೀರಿನ ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ತೋಡಿಗೆ ಬಹಿರ್ದೆಸೆಗೆಂದು ಹೋದಾಗ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅವರ ತಾಯಿ ವನಜಾ ಶೆಟ್ಟಿ ಅವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  ಮೋದಿ-ಬೈಡೆನ್ ಮೊದಲ ಮಾತುಕತೆ: ಕೋವಿಡ್19, ಹವಾಮಾನ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಚರ್ಚೆ

ಸ್ತ್ರೀ ವೇಷಧಾರಿ

ಕಲಾವಿದ ಸುದೀಪ ಶೆಟ್ಟಿ ಅವರು ಮಂದಾರ್ತಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು. ಮೇಗರವಳ್ಳಿ, ಸಿಗಂಧೂರು ಹಾಗೂ ಮಂದಾರ್ತಿ ಮೇಳಗಳಲ್ಲಿ ಕಳೆದ ಕೆಲವು ವರ್ಷಗಳಿಂದ ವೇಷಧಾರಿಯಾಗಿದ್ದರು. ಅವಿವಾಹಿತರಾಗಿರುವ ಅವರು ತಂದೆ, ತಾಯಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಉಡುಪಿಯ ಯಕ್ಷಗಾನ ಕಲಾರಂಗ ಸಂತಾಪ ವ್ಯಕ್ತಪಡಿಸಿದೆ

Advertisement

ಇದನ್ನೂ ಓದಿ:ಇಂದು ಸಿಎಂ ದಿಲ್ಲಿಗೆ; ಎಲ್ಲರ ಚಿತ್ತ ವರಿಷ್ಠರತ್ತ

 

Advertisement

Udayavani is now on Telegram. Click here to join our channel and stay updated with the latest news.

Next