Advertisement

ಕುಳಾಯಿಯಲ್ಲಿ ಯಕ್ಷಗಾನ ಸಾಧಕರಿಗೆ  ಸಮ್ಮಾನ

02:20 AM Jul 10, 2017 | Harsha Rao |

ಸುರತ್ಕಲ್‌: ಪಣಂಬೂರು ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರ ಮಂಡಳಿಯ ವಜ್ರ ಮಹೋತ್ಸವ ಸರಣಿ ಯಕ್ಷಗಾನ ಕಾರ್ಯಕ್ರಮದ ಅಂಗವಾಗಿ ಶನಿವಾರ ಜರಗಿದ ಸಮ್ಮಾನ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಐ. ಗೋಪಾಲರಾವ್‌ ಮತ್ತು  ಎಚ್‌. ಆನಂದ ಹತ್ವಾರ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಾಂಗಣದಲ್ಲಿ  ಜರಗಿದ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕಿನ ನಿವೃತ್ತ ಪ್ರಬಂಧಕ ಎಂ. ಸದಾನಂದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಸುಬ್ರಾಯ ಹೊಳ್ಳ ಹಾಗೂ ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಪಿ. ಶಶಿಧರ ಐತಾಳ್‌ ಆಗಮಿಸಿದ್ದರು.

ಗೋಪಾಲ ಮಯ್ಯ ಮತ್ತು ಪಿ. ನಾಗೇಶ ಕಾರಂತ ಸಮ್ಮಾನಪತ್ರ ವಾಚಿಸಿದರು.
ಪಿ. ಮಧುಕರ ಭಾಗವತ್‌ ಕಾರ್ಯಕ್ರಮ ನಿರೂಪಿಸಿದರು. ಶಂಕರನಾರಾಯಣ  ಮೈರ್ಪಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next