Advertisement

ಪರಕ್ಕಿಲದಲ್ಲಿ ತಂತ್ರಿಗಳ ಸಮಾವೇಶ “ಯಜ್ಞಂ”

11:25 PM Dec 29, 2023 | Team Udayavani |

ಕಾಸರಗೋಡು: ಅಖೀಲ ಕೇರಳ ತಂತ್ರಿ ಸಮಾಜದ ಉತ್ತರ ವಲಯ ಘಟಕದ ವತಿಯಿಂದ “ಯಜ್ಞಂ – 2023′ ಪ್ರಾರಂಭಗೊಂಡಿದೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.

Advertisement

ಘಟಕದ ಉತ್ತರ ವಲಯಾಧ್ಯಕ್ಷ ಇರುವೈಲು ಪದ್ಮನಾಭ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ಲಾಕುಡಿ ಉಣ್ಣಿಕೃಷ್ಣನ್‌ ನಂಬೂದಿರಿ ಅನುಗ್ರಹ ಭಾಷಣ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಉಳಿಯತ್ತಾಯ ವಿಷ್ಣು ಆಸ್ರ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಕ್ಕಾಟ್‌ ಪದ್ಮನಾಭ ಪಟ್ಟೇರಿ ವಂದಿಸಿದರು.

ಬೆಳಗ್ಗೆ ಉಳಿಯದಲ್ಲಿ ಧನ್ವಂತರಿ ಮಂತ್ರಾರ್ಚನೆಯ ಬಳಿಕ ಪರಕ್ಕಿಲ ಮಹಾದೇವ ಶಾಸ್ತಾ ವಿನಾಯಕ ಸನ್ನಿಧಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನೀಲಮನ ರಂಜಿತ್‌ ನರಸಿಂಹನ್‌ ನಂಬೂದಿರಿ ಅಧ್ಯಕ್ಷತೆಯಲ್ಲಿ ಡಾ| ಟಿ.ಪಿ. ರಾಧಾಕೃಷ್ಣನ್‌ ನಂಬೂದಿರಿ, ಪಿ. ಉಣ್ಣಿಕೃಷ್ಣನ್‌ ನಂಬೂದಿರಿ ಧಾರ್ಮಿಕ, ತಾಂತ್ರಿಕ ವಿಧಿವಿಧಾನಗಳ ಬಗ್ಗೆ ಮಾತನಾಡಿದರು.
ಡಿ. 31ರ ತನಕ ಕಾರ್ಯಕ್ರಮ ನಡೆಯಲಿದ್ದು, ಸತ್ಯನಾರಾಯಣ ಪೂಜೆ, ಶ್ರೀ ಸೂಕ್ತ ಹೋಮ ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next