Advertisement

ತೊಗರಿ ರೈತರ ಕಲ್ಯಾಣಕ್ಕಿಲ್ಲ ಯೋಜನೆ

10:57 AM Oct 06, 2019 | |

ಸಂತೋಷ ಬಿ. ನವಲಗುಂದ
ಯಡ್ರಾಮಿ: ತೊಗರಿಗೆ ಇತ್ತೀಚೆಗೆ ಭೌಗೋಳಿಕ ಮಾನ್ಯತೆ(ಜಿಆರ್‌ಆಯ್‌) ದೊರಕಿದ್ದರಿಂದ, ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ಏನು ಲಾಭವಾಗಬಲ್ಲದು ಎನ್ನುವ ಚರ್ಚೆ ಶುರುವಾಗಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಮಳೆ ಕೊರತೆ ಎದ್ದು ಕಂಡರೂ, ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಿನಲ್ಲಿ ಬಂದ ಅಲ್ಪ ಸ್ವಲ್ಪ ಮಳೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದೆ.

Advertisement

ತಾಲೂಕಿನಾದ್ಯಂತ ಶೇ. 40 ಹತ್ತಿ, ಶೇ. 35 ತೊಗರಿ ಬಿತ್ತನೆಯಾಗಿದೆ. ಸಹಕಾರ ಸಂಘಗಳು ರೈತ ಬೆಳೆದ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸುವುದು ಕೇವಲ 10 ಕ್ವಿಂಟಲ್‌ ಮಾತ್ರ. ಪ್ರತಿ ಕ್ವಿಂಟಲ್‌ಗೆ ನೀಡುವ 6100 ರೂ. ನಮ್ಮ ಖಾತೆಗೆ ಜಮೆ ಆಗಲು ಮೂರ್‍ನಾಲ್ಕು ತಿಂಗಳು ಕಾಯಲೇಬೇಕು. ಇನ್ನು ಉಳಿದ ತೊಗರಿ ಯಾರಿಗೆ, ಎಲ್ಲಿ ಮಾರಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಸರ್ಕಾರ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಿ ರೈತರ ಕಲ್ಯಾಣ ಬಯಸುವುದಾದರೆ ನಾವು ಬೆಳೆದ ಪೂರ್ಣ ತೊಗರಿ ಖರೀದಿಸಬೇಕು. ಪ್ರತಿ ಕ್ವಿಂಟಲ್‌ಗೆ 8 ಸಾವಿರ ರೂ. ದರ ನಿಗದಿ ಮಾಡಬೇಕು. ಆಗ ನಿಜವಾದ ಕಾಳಜಿ ಮಾಡಿದಂತೆ ಆಗುತ್ತದೆ ಎನ್ನುತ್ತಾರೆ ರೈತರು.

ಸಂಬಂಧಪಟ್ಟವರು ತೊಗರಿ ಖರೀದಿ ಪ್ರಮಾಣ ಹಾಗೂ ಬೆಂಬಲ ಬೆಲೆ ಪರಿಷ್ಕರಿಸಿ, ರೈತ ಬೆಳೆದ ಸಂಪೂರ್ಣ ತೊಗರಿ ಖರೀದಿಸುವಂತೆ ಆಗಬೇಕು ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next