Advertisement

ಈ ಜನ್ಮದಲ್ಲಿ ಬ್ರಿಗೆಡ್‌ ಒಪ್ಪುವ ಪ್ರಶ್ನೆಯೇ ಇಲ್ಲ: ಬಿಎಸ್‌ವೈ ಕಿಡಿ

12:18 PM Jan 22, 2017 | |

ಕಲಬುರಗಿ: ಈ ಜನ್ಮದಲ್ಲಿ  ಸಂಗೊಳ್ಳಿ ರಾಯಣ್ಣ ಬ್ರಿಗೆಡ್‌ ಒಪ್ಪುವ ಪ್ರಶ್ನೆಯೇ ಇಲ್ಲ …ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ ನೀಡಿರುವ ಖಡಕ್‌ ಸಂದೇಶ.

Advertisement

ಬಿಜೆಪಿ ಕಾರ್ಯಕಾರಿಣಿಯ 2 ನೇ ದಿನವಾದ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ ಪಕ್ಷದ ಚಟುವಟಿಕೆಗೆ ಧಕ್ಕೆ ತಂದೆರೆ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ. ಬ್ರಿಗೆಡ್‌ ಚಟುವಟಿಕೆಗೆ ಅವಕಾಶ ನೀಡಿದರೆ  ತಪ್ಪು ಸಂದೇಶರವಾನೆಯಾಗುತ್ತದೆ. ನಾನು ಯಾವುದೇ ಕಾರಣಕ್ಕೂ ಬ್ರಿಗೆಡ್‌ ಚಟುವಟಿಕೆಗಳನ್ನು ಒಪ್ಪುವುದಿಲ್ಲಎಂದರು. 

ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಅವರು ಎಲ್ಲವನ್ನೂಈಶ್ವರಪ್ಪ ಅವರಿಗೆ  ಮನವರಿಕೆ ಮಾಡಿದ್ದಾರೆ. 
ಬದಲಾಯಿಸಿಕೊಳ್ಳಿ, ಕಾರ್ಯಕಾರಿಣಿ ನಡೆಯುವ ವೇಳೆ ಈಶ್ವರಪ್ಪ ಅವರು ಇಲ್ಲಿಲ್ಲದೇ ಬೇರೆಲ್ಲೋ 
ಬ್ರಗೆಡ್‌ ಹೆಸರಿನಲ್ಲಿ ಭಾಗವಹಿಸುವುದು ಸರಿಯಲ್ಲ ಎಂದರು. 

ಬದಲಾಯಿಸಿಕೊಳ್ಳಿ,ವರಿಷ್ಠರು ಎಲ್ಲವನ್ನು ಗಮನಿಸುತ್ತಿದ್ದಾರೆಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಈಶ್ವರಪ್ಪ ಸೆಡ್ಡು
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಉಚ್ಛಾಟಿತ ನಾಯಕರನ್ನುಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಲಾಗುತ್ತದೆ  ಕೂಡಲ ಸಂಗಮದಲ್ಲಿ ಜನವರಿ 26 ರಂದು ನಡೆಯಲಿದೆ .10 ಜಿಲ್ಲೆಗಳ ದೊಡ್ಡ ಸಮಾವೇಶ ರಾಯಣ್ಣನ ಬಲಿದಾನ ಹೆಸರಿನಲ್ಲಿ ನಡೆಯುತ್ತಿದ್ದು,ಸಮಾರಂಭದಲ್ಲಿ ವಿವಿಧ ಸಮಾಜಗಳ ಸ್ವಾಮೀಜಿಗಳು,  2 ಲಕ್ಷಕ್ಕೂ ಹೆಚ್ಚು ಹಿಂದುಳಿದ ವರ್ಗದ ಜನ ಪಾಲ್ಗೊಳ್ಳಲಿದ್ದಾರೆ.ಇಂದು ಮಧ್ಯಾಹ್ನ ಅಫ್ಜಲ್‌ಪುರ ದಲ್ಲಿ ಪೂರ್ವ ಭಾವಿಯಾಗಿ ತಾಲೂಕು ಮಟ್ಟದ ಸಭೆ ನಡೆಸುತ್ತಿದ್ದೇವೆ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next