Advertisement

ರೈತರ ಮೊಗದಲ್ಲಿ ಸಂತಸ ತಂದ ಮಳೆ

06:12 PM Jun 28, 2020 | Naveen |

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯಲ್ಲಿ ರೈತರು ಮುಂಗಾರು ಬಿತ್ತನೆ ಮಾಡಿದ್ದು ಬೀಜ ಮೊಳಕೆಯೊಡೆದಿರುವ ಸಂದರ್ಭದಲ್ಲಿ ಮಳೆ ಸುರಿದಿರುವುದು ಮೊಳಕೆ ಬೆಳವಣಿಗೆಗೆ ಪೂರಕವಾಗಿದೆ.

Advertisement

ಶಹಾಪುರ ವ್ಯಾಪ್ತಿಯಲ್ಲಿ ಅತೀ ಹೆಚ್ಚು 74 ಮಿ.ಮೀ, ಸುರಪುರ ವ್ಯಾಪ್ತಿಯಲ್ಲಿ 42 ಮಿ.ಮೀ, ಹುಣಸಗಿ 50 ಮಿ.ಮೀ ಮತ್ತು ವಡಗೇರಾ 14 ಮಿ.ಮೀ ಮಳೆಯಾಗಿದ್ದರೆ ಗುರುಮಠಕಲ್‌ ಹಾಗೂ ಯಾದಗಿರಿ ತಾಲೂಕು ವ್ಯಾಪ್ತಿಯಲ್ಲಿ ಅತಿ ಕಡಿಮೆ ತಲಾ 1ಮಿ. ಮೀ ಮಳೆಯಾಗಿರುವ ಕುರಿತು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next