Advertisement

Yadagiri: ಶಾಸಕ ಚೆನ್ನಾರೆಡ್ಡಿ ಪಾಟೀಲ ವಿರುದ್ದ ಧಿಕ್ಕಾರ ಕೂಗಿದ ದಲಿತ ಮುಖಂಡರು

11:55 AM Sep 15, 2024 | Team Udayavani |

ಯಾದಗಿರಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿ ಕಾರ್ಯಕ್ರಮದಲ್ಲಿ ‘ಜೈ ಭೀಮ್ ಹಾಗೂ ಜೈ ಸಂವಿಧಾನ’ ಘೋಷಣೆಯನ್ನು ಹಾಕದೆ ಇರುವ ಕಾರಣ ಜಿಲ್ಲಾಡಳಿತ ವಿರುದ್ಧ ಧ್ವನಿ ಎತ್ತಿದ ಜಿಲ್ಲೆಯ ದಲಿತ ಮುಖಂಡರು, ಪಿಎಸ್.ಐ ಪರಶುರಾಮ ಸಾವಿನ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ್ ಅವರ ವಿರುದ್ದವೂ ಧಿಕ್ಕಾರ ಕೂಗಿದರು.

ದಲಿತ ವಿರೋಧಿ ಶಾಸಕ ಚನ್ನಾರೆಡ್ಡಿ ಪಾಟೀಲ ಕಾರ್ಯಕ್ರಮಕ್ಕೆ ಯಾಕೆ ಕರೆಸಿದ್ದೀರಿ, ಪಿಎಸ್.ಐ ಸಾವಿನ ಪ್ರಕರಣದಲ್ಲಿ ಇರುವ ಅವರಿಗೆ ಯಾವ ನೈತಿಕತೆ ಇದೆ ಎಂದು ಕಾರ್ಯಕ್ರಮದ ಕೊನೆಯಲ್ಲಿ ದಲಿತ ಮುಖಂಡರು ವಿರೋಧ ವ್ಯಕ್ತಪಡಿಸಿದರು.

Advertisement

ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಕಾರು ಅಡ್ಡಗಟ್ಟಿ ಸಚಿವರೇ ಉತ್ತರಿಸಿ ಎಂದು ದಲಿತ ಮುಖಂಡರ ವಿರೋಧ ವ್ಯತಿರಿಕ್ತವಾದ ಪರಿಣಾಮ ಎಸ್ಪಿ ಸಂಗೀತಾ.ಜಿ ಅವರು ಮುಖಂಡರನ್ನು ನಿಭಾಯಿಸುವಲ್ಲಿ ಮುಂದಾದಾಗ ಎಸ್ಪಿ ಅವರಿಗೂ ಧಿಕ್ಕಾರ ಕೂಗಿದ ಪ್ರಸಂಗ ಜಿಲ್ಲಾಡಳಿತ ಭವನ ಆವರಣದಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next