Advertisement

ಯಾದಗಿರಿ: ಹೋಟೆಲ್ ನಲ್ಲಿ ಸಿಲಿಂಡರ್ ಸ್ಫೋಟ ಅಪಾರ ಹಾನಿ

10:40 AM Sep 08, 2019 | Team Udayavani |

ಯಾದಗಿರಿ :ಶಾರ್ಟ್ ಸರ್ಕ್ಯುಟ್ ನಿಂದ ಹೋಟೆಲ್ ನಲ್ಲಿದ್ದ 2 ಸಿಲೆಂಡರ್ ಸ್ಪೋಟಗೊಂಡು ಅಪಾರ ಸೊತ್ತು ಹಾನಿ ಸಂಭವಿಸಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ .

Advertisement

ಪಟ್ಟಣದ ಈಶಪ್ಪ ಎನ್ನುವವರಿಗೆ ಸೇರಿದ ಹೋಟೆಲ್ ನಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಲೇ ಹೋಟೆಲ್ ನಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ.

ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಪಕ್ಕದಲ್ಲಿರುವ ಹೇರ್ ಸೆಲೂನ್ ಅಂಗಡಿಗೂ ಆವರಿಸಿ ಅಪಾರ ಹಾನಿಯಾಗಿದೆ.

ಸ್ಥಳೀಯರು ಹಾಗೂ ಪೊಲೀಸರಿಂದ ಬೆಂಕಿ ನಂದಿಸುವ ಕಾರ್ಯ ಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next